‘ನಾನು ನಾಪತ್ತೆಯಾಗಿಲ್ಲ. ಧರ್ಮಸ್ಥಳಕ್ಕೆ ಪ್ರಕೃತಿ ಚಿಕಿತ್ಸೆಗೆ ಹೋಗಿದ್ದೆ. ವರಿಷ್ಠರ ಆದೇಶದಂತೆ ಬೆಂಗಳೂರಿಗೆ ಹೋಗುತ್ತಿದ್ದೇನೆ. ನಾನು ದುಡ್ಡಿನ ಹಿಂದೆ ಹೋಗುವ ಮನುಷ್ಯನಲ್ಲ. ಕ್ಷೇತ್ರದಲ್ಲಿ ಸುಮಾರು 64 ಸಾವಿರ ಜನ ನನಗೆ ಮತ ಹಾಕಿದ್ದಾರೆ. ಅವರ ಋಣ ನನ್ನ ಮೇಲಿದೆ. ಅದನ್ನು ತೀರಿಸಬೇಕು. ಅಲ್ಲದೇ ಪಕ್ಷ ನನ್ನನ್ನು ಗುರುತಿಸಿ ಎರಡು ಬಾರಿ ‘ಬಿ’ ಫಾರ್ಮ್ ನೀಡಿದೆ. ಇದನ್ನೆಲ್ಲ ಮರೆಯಲಾಗುವುದಿಲ್ಲ’ ಎಂದು ಪಕ್ಷನಿಷ್ಠೆ ಪ್ರದರ್ಶಿಸಿದರು.