‘ಪ್ರತಿಭಟನೆ ನಡೆಸುತ್ತಿದ್ದವರಿಗೆ ಎಳನೀರು, ಶರಬತ್ ಕುಡಿಸಿದವರೆಲ್ಲ ಬೆಳಗಾವಿ ಜಿಲ್ಲೆಯ ನಾಯಕರಾಗಲು ಸಾಧ್ಯವಿಲ್ಲ’ ಎಂದು ಪರೋಕ್ಷವಾಗಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ಗೆ ಟಾಂಗ್ ನೀಡಿದರು. ಇತ್ತೀಚೆಗೆ ಕಬ್ಬಿನ ಬಾಕಿ ಬಿಲ್ಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿದ್ದ ರೈತರ ಜೊತೆ ಸಂಧಾನ ನಡೆಸಿದ ಶಿವಕುಮಾರ್, ಎಳನೀರು ಕುಡಿಸಿ, ಧರಣಿ ಅಂತ್ಯಗೊಳಿಸಿದ್ದನ್ನು ಸ್ಮರಿಸಬಹುದು.