<p><strong>ಬೆಂಗಳೂರು:</strong> ‘ಉತ್ಕೃಷ್ಟ ಯೋಜನೆ’ ಅಡಿಯಲ್ಲಿ ಹೈಟೆಕ್ ರೂಪ ಪಡೆದಿರುವ ‘ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್’ಗೆ ಶನಿವಾರ ಲೋಕಾರ್ಪಣೆಗೊಂಡಿತು.</p>.<p>ಈ ಯೋಜನೆಯಡಿ ಮೊದಲ ಹಂತದಲ್ಲಿ 10 ಮತ್ತು ಎರಡನೇ ಹಂತದಲ್ಲಿ 26 ರೈಲುಗಳನ್ನು ನವೀಕರಿಸುವ ಯೋಜನೆಯನ್ನು ನೈರುತ್ಯ ರೈಲ್ವೆ ಹಾಕಿಕೊಂಡಿದೆ. ವಾರಾಣಸಿ–ಹುಬ್ಬಳ್ಳಿ–ವಾರಾಣಸಿ ಎಕ್ಸ್ಪ್ರೆಸ್ ನವೀಕೃತ ರೈಲು ಮೇ 24ರಂದು ಉದ್ಘಾಟನೆಗೊಂಡಿತ್ತು.</p>.<p>ಬೆಂಗಳೂರು–ಕೊಲ್ಲಾಪುರ–ಬೆಂಗಳೂರು (ರಾಣಿ ಚೆನ್ನಮ್ಮ) ಎಕ್ಸ್ಪ್ರೆಸ್ಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿಶನಿವಾರ ಚಾಲನೆ ನೀಡಲಾಯಿತು.</p>.<p>‘ಹುಬ್ಬಳ್ಳಿ ಮತ್ತು ಮೈಸೂರು ಕಾರ್ಯಾಗಾರಗಳಲ್ಲಿ ಈ ರೈಲುಗಳು ನವೀಕೃತಗೊಂಡಿವೆ. ಪ್ರತಿ ರೈಲು ನವೀಕರಣಕ್ಕೆ ₹60 ಲಕ್ಷ ವೆಚ್ಚವಾಗಿದೆ. ಎಲ್ಲಾ ಬೋಗಿಗಳಿಗೆ ಏಪ್ರಿಕಾಟ್ ಹಳದಿ ಮತ್ತು ರಕ್ತ ಕೆಂಪು ಬಣ್ಣ ಬಳಿಯಲಾಗಿದೆ. ಎಲ್ಇಡಿ ದೀಪಗಳು, ಶೌಚಾಲಯಗಳಿಗೆ ಪರಿಸರ ಸ್ನೇಹಿ ನೆಲಹಾಸು ಹೊದಿಸಲಾಗಿದೆ’ ಎಂದು ರೈಲ್ವೆ ಇಲಾಖೆ ತಿಳಿಸಿದೆ.</p>.<p>ಹವಾನಿಯಂತ್ರಿತ ಬೋಗಿಗಳಿಗೆ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳನ್ನು ಅಂಟಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಬೋಗಿಗಳಿಗೂ ಅಗ್ನಿ ಶಾಮಕಗಳನ್ನು ಅಳವಡಿಸಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ವಿವರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಉತ್ಕೃಷ್ಟ ಯೋಜನೆ’ ಅಡಿಯಲ್ಲಿ ಹೈಟೆಕ್ ರೂಪ ಪಡೆದಿರುವ ‘ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್’ಗೆ ಶನಿವಾರ ಲೋಕಾರ್ಪಣೆಗೊಂಡಿತು.</p>.<p>ಈ ಯೋಜನೆಯಡಿ ಮೊದಲ ಹಂತದಲ್ಲಿ 10 ಮತ್ತು ಎರಡನೇ ಹಂತದಲ್ಲಿ 26 ರೈಲುಗಳನ್ನು ನವೀಕರಿಸುವ ಯೋಜನೆಯನ್ನು ನೈರುತ್ಯ ರೈಲ್ವೆ ಹಾಕಿಕೊಂಡಿದೆ. ವಾರಾಣಸಿ–ಹುಬ್ಬಳ್ಳಿ–ವಾರಾಣಸಿ ಎಕ್ಸ್ಪ್ರೆಸ್ ನವೀಕೃತ ರೈಲು ಮೇ 24ರಂದು ಉದ್ಘಾಟನೆಗೊಂಡಿತ್ತು.</p>.<p>ಬೆಂಗಳೂರು–ಕೊಲ್ಲಾಪುರ–ಬೆಂಗಳೂರು (ರಾಣಿ ಚೆನ್ನಮ್ಮ) ಎಕ್ಸ್ಪ್ರೆಸ್ಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿಶನಿವಾರ ಚಾಲನೆ ನೀಡಲಾಯಿತು.</p>.<p>‘ಹುಬ್ಬಳ್ಳಿ ಮತ್ತು ಮೈಸೂರು ಕಾರ್ಯಾಗಾರಗಳಲ್ಲಿ ಈ ರೈಲುಗಳು ನವೀಕೃತಗೊಂಡಿವೆ. ಪ್ರತಿ ರೈಲು ನವೀಕರಣಕ್ಕೆ ₹60 ಲಕ್ಷ ವೆಚ್ಚವಾಗಿದೆ. ಎಲ್ಲಾ ಬೋಗಿಗಳಿಗೆ ಏಪ್ರಿಕಾಟ್ ಹಳದಿ ಮತ್ತು ರಕ್ತ ಕೆಂಪು ಬಣ್ಣ ಬಳಿಯಲಾಗಿದೆ. ಎಲ್ಇಡಿ ದೀಪಗಳು, ಶೌಚಾಲಯಗಳಿಗೆ ಪರಿಸರ ಸ್ನೇಹಿ ನೆಲಹಾಸು ಹೊದಿಸಲಾಗಿದೆ’ ಎಂದು ರೈಲ್ವೆ ಇಲಾಖೆ ತಿಳಿಸಿದೆ.</p>.<p>ಹವಾನಿಯಂತ್ರಿತ ಬೋಗಿಗಳಿಗೆ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳನ್ನು ಅಂಟಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಬೋಗಿಗಳಿಗೂ ಅಗ್ನಿ ಶಾಮಕಗಳನ್ನು ಅಳವಡಿಸಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ವಿವರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>