‘ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದಲ್ಲಿ ಕ್ರೈಸ್ತ ಸಮುದಾಯವು ದೇಶದ ಶಿಕ್ಷಣ, ಆರೋಗ್ಯ, ಸಾಹಿತ್ಯ, ಸಮಾಜ ಸೇವೆ ಕ್ಷೇತ್ರಗಳಲ್ಲಿ ಅಪಾರವಾಗಿ ದುಡಿದು, ದೀನ ದಲಿತರ ಸೇವೆಯನ್ನು ಮಾಡಿಕೊಂಡು ಬರುತ್ತಿದೆ. ಕ್ರೈಸ್ತ ಸಮುದಾಯವು ನೀಡುವ ಸೇವೆಗಳಲ್ಲಿ ಜಾತಿ, ಮತ, ನಂಬಿಕೆ, ಧರ್ಮ, ಪ್ರದೇಶಗಳ ಹಂಗಿಲ್ಲ. ಮತಾಂತರವಾದ ಬುಡಕಟ್ಟು ಜನರಿಗೆ ಯಾವುದೇ ಸವಲತ್ತುಗಳನ್ನು ನೀಡುವುದು ಬೇಡ ಎಂದಿರುವ ನೀವು ಸಂವಿಧಾನದ ಮೂಲ ಆಶಯಗಳನ್ನೇ ಮರೆತಂತಿದೆ’ ಎಂದು ಬೆಂಗಳೂರು ಮಹಾಧರ್ಮಕ್ಷೇತ್ರ ಆಕ್ರೋಶ ವ್ಯಕ್ತಪಡಿಸಿದೆ.