ಪುತ್ರನ ಸಾವಿನಿಂದ ಸೊಸೆಯ ಬಾಳು ಸಂಕಷ್ಟಕ್ಕೆ ಸಿಲುಕಿದಾಗ, ‘ಅವಳಿಗೊಂದು ಗಂಡಿನಾಸರೆ ಬೇಕು. ನಮಗೆ ಅವರೇ ಮುಂದೆ ದಾರಿ ದೀಪ’ ಎಂದೆಣಿಸಿ ಮರು ವಿವಾಹ ಮಾಡಿಸಿದ್ದಾರೆ.
ಅವರ ಪುತ್ರ ಪ್ರಶಾಂತ್ ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಇದರಿಂದ ಪತ್ನಿ ವೀಣಾ (22) ಕನಸಿನ ಗೋಪುರ ಕುಸಿದು ಬಿದ್ದಿತ್ತು. ಪುತ್ರ ಯಶ್ಮಿಕ್ನ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯೂ ವೀಣಾ ಮೇಲಿತ್ತು. ಅತ್ತೆ ಮಾವಂದಿರಿಗೂ ಒಬ್ಬನೇ ಮಗನ ಸಾವನ್ನು ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ಸೊಸೆಗೆ ಅವರೇ ನಿಂತು ಮರುವಿವಾಹ ಮಾಡಿಸಿ, ವರನನ್ನು ಮನೆ ಮಗನಾಗಿ ಮನೆ ತುಂಬಿಸಿಕೊಂಡಿದ್ದಾರೆ.