‘ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಜಾಗತಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಲು ಸಾಕಷ್ಟು ಅವಕಾಶಗಳಿದ್ದವು. ಆದರೆ, ಆಯ್ದುಕೊಂಡ ಮಾರ್ಗದಲ್ಲಿ ದೋಷವಿದ್ದಿದ್ದರಿಂದ ಅವಕಾಶಗಳು ಕೈತಪ್ಪಿದವು. 1962ರ ನಂತರ ಭಾರತ ಹೊರಜಗತ್ತಿನ ಕಡೆಗೆ ಆಲೋಚಿಸುವುದನ್ನು ಬಿಟ್ಟು, ಸಂಪೂರ್ಣ ಅಂತರ್ಮುಖಿಯಾಯಿತು. ಇದರಿಂದಾಗಿ ತಲಾ ಆದಾಯ, ಯುದ್ಧೋಪಕರಣಗಳ ಖರೀದಿ, ಸಂಶೋಧನೆ, ಹೂಡಿಕೆ ಸೇರಿ ಅನೇಕ ಆರ್ಥಿಕ ವಿಚಾರದಲ್ಲಿ ಭಾರತ ಸಾಕಷ್ಟು ಹಿಂದೆ ಬೀಳಬೇಕಾಯಿತು. ಈಗ ಪರಿಸ್ಥಿತಿ ದೇಶಕ್ಕೆ ಪೂರಕವಾಗಿದ್ದು, ದೇಶವು ಜಾಗತಿಕ ನಾಯಕತ್ವ ವಹಿಸಲು ಮುಂದಿನ 10 ವರ್ಷಗಳು ನಿರ್ಣಾಯಕ’ ಎಂದು ರಾಮ್ ಮಾಧವ್ ಹೇಳಿದರು.