ತವರಿಗೆ ಹಿಂತಿರುಗಿದ ನಾಗಮ್ಮಅವರನ್ನು ಕನಿಷ್ಠ ಕೂಲಿಗೆ ದುಡಿದು ಕುಟುಂಬವನ್ನು ಸಲಹುತ್ತಿರುವ ಮಹಿಳೆಯರ ನೋವುಗಳು ಕಾಡತೊಡಗಿದವು. ಊರಿನ ಕೆಲವು ಮಹಿಳೆಯರು ಹೆಚ್ಚಿನ ಕೂಲಿಗಾಗಿ ಪಕ್ಕದ ಹಳ್ಳಿಗಳಿಗೆ ಹೋಗುತ್ತಿದ್ದರು. ಅವರನ್ನು ವಾಪಸ್ ಕರೆತಂದ ಊರಿನ ಶ್ರೀಮಂತನೊಬ್ಬ, ತನ್ನ ಹೊಲದಲ್ಲೇ ಕೆಲಸ ಮಾಡುವಂತೆ ಕರಾರು ಮಾಡಿಸಿಕೊಂಡಿದ್ದನು. ಈ ಬೆಳವಣಿಗೆ ವಿರದ್ಧ ಸಿಡಿದೆದ್ದ ನಾಗಮ್ಮ, ಶೋಷಣೆಯಿಂದ ಮಹಿಳೆಯರನ್ನು ಬಿಡುಗಡೆಗೊಳಿಸುವ ಪಣ ತೊಟ್ಟರು. ರೊಟ್ಟಿ ತಟ್ಟಿ, ಕೂಲಿನಾಲಿ ಮಾಡುತ್ತಿದ್ದ ಅವರು, ಸಂಘಟನೆಗೆ ಇಳಿದರು.