<p>‘ಭಾರತವೇ ಈ ಭೂಲೋಕದ ಜಗದ್ಗುರು!’ ಅಂತ ಬೆಕ್ಕಣ್ಣ ಬೆಳಬೆಳಗ್ಗೆಯೇ ಖುಷಿಯಿಂದ ಕುಣಿಯಿತು.</p>.<p>ನಾನು ಇದು ಹೇಗೆ ಸಾಧ್ಯವೆಂದು ಹೌಹಾರಿಬಿಟ್ಟೆ.</p>.<p>‘ನೋಡಿಲ್ಲಿ’ ಎಂದು ‘ಪ್ರಜಾವಾಣಿ’ ಪತ್ರಿಕೆಯ ‘ವಿಜ್ಞಾನ ವಿಶೇಷ’ ಅಂಕಣ ಬರಹವನ್ನು ಮುಖಕ್ಕೆ ಹಿಡಿಯಿತು.</p>.<p>‘ಮಂಗ್ಯಾನಂಥವ್ನೇ… ಹೆಡ್ಡಿಂಗೂ ಪೂರ್ಣ ಓದದೇ ಕುಣೀತೀಯ. ನಾವು ಗುಜರಿ ಲೋಕದ ಜಗದ್ಗುರು ಅಂತ ಅಲ್ಲಿರೋದು!’ ಎಂದು ಬೆಕ್ಕಣ್ಣನ ತಲೆ ಮೇಲೆ ಮೊಟಕಿದೆ.</p>.<p>ಬೆಕ್ಕಣ್ಣನ ಮುಖ ಇಂಗು ತಿಂದ ಮಂಗನಂತೆ ಆದರೂ ತೋರಗೊಡದೇ, ‘ನೋಡು ಮತ್ತೆ… ನಾವು ಇಡೀ ಭೂಮಂಡಲಕ್ಕೆ ಎಂಥ ಘನವಾದ ಸೇವೆ ಕೊಡಾಕೆ ಹತ್ತೀವಿ!’ ಎಂದಿತು.</p>.<p>‘ಅಮೆರಿಕದ 11/9 ದುರಂತದಲ್ಲಿ ಬಿದ್ದ ಎಲ್ಲಾ ಕಟ್ಟಡಗಳ 950 ಟನ್ ವಿಷಕಾರಿ ತ್ಯಾಜ್ಯ ನಮ್ಮ ದೇಶಕ್ಕೆ ಬಂತು. ಎಲ್ಲಾ ಶ್ರೀಮಂತ ದೇಶಗಳ ಪ್ಲಾಸ್ಟಿಕ್ ತ್ಯಾಜ್ಯ ಇಲ್ಲಿಗೆ ಒಗೀತಾರೆ. ಹಳೇ ಹಡಗುಗಳೆಲ್ಲ ವಿಲೇವಾರಿಗೆ ಅಲಂಗ್ ಬಂದರಿಗೆ ಬರತಾವೆ. ನಾವು ಆ ದೇಶಗಳ ತಿಪ್ಪೇಗುಂಡಿ ಆಗೀವಿ, ತಿಳೀತಿಲ್ಲೋ!’ ಎಂದೆ.</p>.<p>‘ಈ ಶ್ರೀಮಂತ ದೇಶಗಳು ಪ್ಲಾಸ್ಟಿಕ್ಕು, ವಿಷಕಾರಿ ತ್ಯಾಜ್ಯ, ಹಾಳುಮೂಳುಗಳನ್ನು ನಮ್ಮ ದೇಶಕ್ಕೆ ಕಳಿಸಿ, ತಮ್ಮ ರಸ್ತೆಗಳು, ಸಮುದ್ರ ದಡ ಎಲ್ಲ ಸ್ವಚ್ಛ ಇಟಕೋತಾರೆ. ನಮ್ಮ ಕಸವೇ ನಮಗೆ ಹಾಸಲುಂಟು, ಹೊದೆಯಲುಂಟು… ಅಂತಾದ್ರಲ್ಲಿ ಬೇರೆ ದೇಶಗಳ ಕಸಾನೂ ಇಲ್ಲೇ ಸುರಿತಾರೆ’ ಎಂದು ಬೆಕ್ಕಣ್ಣ ಗುರುಗುಟ್ಟಿತು.</p>.<p>ತುಸು ಹೊತ್ತು ಬಿಟ್ಟು, ‘ಹೋಗ್ಲಿಬಿಡು, ಇವತ್ತಾರೆ ಖೀರು ಮಾಡು’ ಎಂದು ಮೆತ್ತಗೆ ಉಲಿಯಿತು.</p>.<p>‘ಇವತ್ ಯಾವ ಹಬ್ಬ ಖೀರು ಮಾಡಕ್ಕೆ?’ ಎಂದೆ ಅಚ್ಚರಿಯಿಂದ. </p>.<p>‘ಮಣಿಪುರ ಜನಾಂಗೀಯ ಘರ್ಷಣೆಯಲ್ಲಿ ಹೊತ್ತಿ ಉರೀತಾ ಎರಡು ವರ್ಷವಾತು. ನಮ್ ಜಗದ್ಗುರು ಮೋದಿ ಮಾಮಾರು ಮೊನ್ನೆ ಅಲ್ಲಿಗೆ ಹೋಗಿ ಅಭಿವೃದ್ಧಿ ಕೊಡುಗೆ ಕೊಟ್ಟು ಬಂದರು. ಅದಕ್ಕೇ!’ ಎಂದು ಮುಸಿ ಮುಸಿ ನಕ್ಕಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಭಾರತವೇ ಈ ಭೂಲೋಕದ ಜಗದ್ಗುರು!’ ಅಂತ ಬೆಕ್ಕಣ್ಣ ಬೆಳಬೆಳಗ್ಗೆಯೇ ಖುಷಿಯಿಂದ ಕುಣಿಯಿತು.</p>.<p>ನಾನು ಇದು ಹೇಗೆ ಸಾಧ್ಯವೆಂದು ಹೌಹಾರಿಬಿಟ್ಟೆ.</p>.<p>‘ನೋಡಿಲ್ಲಿ’ ಎಂದು ‘ಪ್ರಜಾವಾಣಿ’ ಪತ್ರಿಕೆಯ ‘ವಿಜ್ಞಾನ ವಿಶೇಷ’ ಅಂಕಣ ಬರಹವನ್ನು ಮುಖಕ್ಕೆ ಹಿಡಿಯಿತು.</p>.<p>‘ಮಂಗ್ಯಾನಂಥವ್ನೇ… ಹೆಡ್ಡಿಂಗೂ ಪೂರ್ಣ ಓದದೇ ಕುಣೀತೀಯ. ನಾವು ಗುಜರಿ ಲೋಕದ ಜಗದ್ಗುರು ಅಂತ ಅಲ್ಲಿರೋದು!’ ಎಂದು ಬೆಕ್ಕಣ್ಣನ ತಲೆ ಮೇಲೆ ಮೊಟಕಿದೆ.</p>.<p>ಬೆಕ್ಕಣ್ಣನ ಮುಖ ಇಂಗು ತಿಂದ ಮಂಗನಂತೆ ಆದರೂ ತೋರಗೊಡದೇ, ‘ನೋಡು ಮತ್ತೆ… ನಾವು ಇಡೀ ಭೂಮಂಡಲಕ್ಕೆ ಎಂಥ ಘನವಾದ ಸೇವೆ ಕೊಡಾಕೆ ಹತ್ತೀವಿ!’ ಎಂದಿತು.</p>.<p>‘ಅಮೆರಿಕದ 11/9 ದುರಂತದಲ್ಲಿ ಬಿದ್ದ ಎಲ್ಲಾ ಕಟ್ಟಡಗಳ 950 ಟನ್ ವಿಷಕಾರಿ ತ್ಯಾಜ್ಯ ನಮ್ಮ ದೇಶಕ್ಕೆ ಬಂತು. ಎಲ್ಲಾ ಶ್ರೀಮಂತ ದೇಶಗಳ ಪ್ಲಾಸ್ಟಿಕ್ ತ್ಯಾಜ್ಯ ಇಲ್ಲಿಗೆ ಒಗೀತಾರೆ. ಹಳೇ ಹಡಗುಗಳೆಲ್ಲ ವಿಲೇವಾರಿಗೆ ಅಲಂಗ್ ಬಂದರಿಗೆ ಬರತಾವೆ. ನಾವು ಆ ದೇಶಗಳ ತಿಪ್ಪೇಗುಂಡಿ ಆಗೀವಿ, ತಿಳೀತಿಲ್ಲೋ!’ ಎಂದೆ.</p>.<p>‘ಈ ಶ್ರೀಮಂತ ದೇಶಗಳು ಪ್ಲಾಸ್ಟಿಕ್ಕು, ವಿಷಕಾರಿ ತ್ಯಾಜ್ಯ, ಹಾಳುಮೂಳುಗಳನ್ನು ನಮ್ಮ ದೇಶಕ್ಕೆ ಕಳಿಸಿ, ತಮ್ಮ ರಸ್ತೆಗಳು, ಸಮುದ್ರ ದಡ ಎಲ್ಲ ಸ್ವಚ್ಛ ಇಟಕೋತಾರೆ. ನಮ್ಮ ಕಸವೇ ನಮಗೆ ಹಾಸಲುಂಟು, ಹೊದೆಯಲುಂಟು… ಅಂತಾದ್ರಲ್ಲಿ ಬೇರೆ ದೇಶಗಳ ಕಸಾನೂ ಇಲ್ಲೇ ಸುರಿತಾರೆ’ ಎಂದು ಬೆಕ್ಕಣ್ಣ ಗುರುಗುಟ್ಟಿತು.</p>.<p>ತುಸು ಹೊತ್ತು ಬಿಟ್ಟು, ‘ಹೋಗ್ಲಿಬಿಡು, ಇವತ್ತಾರೆ ಖೀರು ಮಾಡು’ ಎಂದು ಮೆತ್ತಗೆ ಉಲಿಯಿತು.</p>.<p>‘ಇವತ್ ಯಾವ ಹಬ್ಬ ಖೀರು ಮಾಡಕ್ಕೆ?’ ಎಂದೆ ಅಚ್ಚರಿಯಿಂದ. </p>.<p>‘ಮಣಿಪುರ ಜನಾಂಗೀಯ ಘರ್ಷಣೆಯಲ್ಲಿ ಹೊತ್ತಿ ಉರೀತಾ ಎರಡು ವರ್ಷವಾತು. ನಮ್ ಜಗದ್ಗುರು ಮೋದಿ ಮಾಮಾರು ಮೊನ್ನೆ ಅಲ್ಲಿಗೆ ಹೋಗಿ ಅಭಿವೃದ್ಧಿ ಕೊಡುಗೆ ಕೊಟ್ಟು ಬಂದರು. ಅದಕ್ಕೇ!’ ಎಂದು ಮುಸಿ ಮುಸಿ ನಕ್ಕಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>