ಮಂಗಳವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಅಪ್ಪು ಡಿಟೆಕ್ಟಿವ್ ಆ್ಯಂಡ್ ಸೆಕ್ಯುರಿಟಿ ಏಜೆನ್ಸಿಗೆ ರಾಜರಾಜೇಶ್ವರಿನಗರ ಮತ್ತು ದಕ್ಷಿಣ ವಲಯದ ಶಾಲೆಗಳಿಗೆ ಶಿಕ್ಷಕರ ಪೂರೈಕೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಎಂಬ ಹೆಸರಿನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಕಾರ್ಯಾದೇಶ ನೀಡಿದ್ದಾರೆ. ಇದು ಯಾವ ಕಾಮಗಾರಿ’ ಎಂದು ಪ್ರಶ್ನಿಸಿದರು.