‘ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರನ್ನು ಸ್ವಾರ್ಥಕ್ಕೆ ಬಳಸಿಕೊಂಡು ಕಡೆಗಣಿಸಿದೆ ಎಂಬ ಸಂಗತಿಯೂ ಬೇಗ್ ಅವರಿಗೆ ತಡವಾಗಿ ಅರಿವಿಗೆ ಬಂದಿದೆ. ಬಹುಶಃ ಮೊದಲೇ ಅರಿವಿಗೆ ಬಂದಿದ್ದರೂ, ಹೇಳಲಾಗದೇ ಚಡಪಡಿಸುತ್ತಿದ್ದರು ಅನ್ನಿಸುತ್ತಿದೆ’ ಎಂದ ಸದಾನಂದಗೌಡ, ‘ಬಿಜೆಪಿಯ ತತ್ವ, ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತಿಸುತ್ತೇವೆ’ ಎಂದರು.