ಮೂವರು ಹಿರಿಯ ಸಾಹಿತಿಗಳಾದ ಬಿ.ಆರ್. ಲಕ್ಷ್ಮಣ ರಾವ್, ಡಾ. ನಾ. ದಾಮೋದರ ಶೆಟ್ಟಿ, ಡಾ. ಲತಾ ಗುಟ್ಟಿ ಆಯ್ಕೆ ಸಮಿತಿಯಲ್ಲಿ ಇದ್ದರು.
ವಿಜಯಮ್ಮ ಎಂದೇ ಚಿರಪರಿಚಿತರಾಗಿರುವ ಡಾ.ವಿಜಯಾ ಅವರು ತಮ್ಮ ಆತ್ಮಕಥನ ‘ಕುದಿ ಎಸರು’ ಪುಸ್ತಕದಲ್ಲಿ ಮನದಲ್ಲಾದ ತಳಮಳಗಳನ್ನು ಭಾವುಕವಾಗಿ ಟಿಪ್ಪಣಿ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಓದುಗರನ್ನು ಸಂವೇದನೆಗೆ ನೂಕುವ ಈ ಪುಸ್ತಕ ಅರಿವನ್ನು ಹುಟ್ಟಿಸುತ್ತದೆ. ಅರಿವು ಮನುಷ್ಯತ್ವದೆಡೆಗೆ ಕೊಂಡೊಯ್ಯುತ್ತದೆ ಎಂದು ವಿಜಯಮ್ಮ ಆಪ್ತವಾಗಿ ಬರೆದುಕೊಂಡಿದ್ದಾರೆ.