ಧಾರವಾಡ: ‘ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕುಂಭ ಮೆರವಣಿಗೆ ನಡೆದರೆ, ಅದು ಪರೋಕ್ಷವಾಗಿ ಕುಂಬಾರರಿಗೆ ನೆರವಾಗಲಿದೆ. ಹೀಗಾಗಿ, ಮಹಿಳೆಯರು ಮಾತ್ರವಲ್ಲ ಪುರುಷರೂ ಕುಂಭವನ್ನು ಹೊರುವಂತಾಗಬೇಕು’ ಎಂದು ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.
ಧಾರವಾಡ ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮಲ್ಲಿ ಬಹಳಷ್ಟು ಕಸುಬುಗಳನ್ನು ನೆಚ್ಚಿಕೊಂಡಿರುವ ಸಣ್ಣ ಸಮುದಾಯಗಳು ಸಂಕಷ್ಟದಲ್ಲಿವೆ. ಮೇಳ, ಸಮ್ಮೇಳನದಂಥ ಕಾರ್ಯಕ್ರಮಗಳಲ್ಲಿ ಇಂಥ ಸಣ್ಣ ಕಸುಬುದಾರರಿಗೆ ಒಂದಷ್ಟು ಕೆಲಸ ಸಿಕ್ಕಲ್ಲಿ, ಅವರ ಬದುಕಿಗೆ ಒಂದು ದಾರಿಯಾಗಲಿದೆ. ಅದರಿಂದ ಆ ಕುಟುಂಬಗಳ ಮಹಿಳೆಯರಿಗೂ ಸಹಾಯವಾಗುತ್ತದೆ’ ಎಂದರು.