ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ನಾಯಕರ ಹೇಳಿಕೆಗಳನ್ನು ಗಮನಿಸಿದಾಗ, 2008ರಿಂದ 2012ರವರೆಗೆ ಅವರ ಪಕ್ಷದ ನಾಯಕರು ಪರಪ್ಪನ ಅಗ್ರಹಾರಕ್ಕೆ ಪರೇಡ್ ನಡೆಸಿದ ದಿನಗಳು ಕಣ್ಮುಂದೆ ಬರುತ್ತಿರುವಂತೆ ಕಾಣಿಸುತ್ತಿದೆ. ಬಿಜೆಪಿ ಮುಖಂಡರು ಜಾಣರಾಗಿರುವುದೇ ಹೌದಾದರೆ, ಈ ಮಾತು ಅರ್ಥ ಮಾಡಿಕೊಂಡು ಆಪರೇಷನ್ ಕಮಲದ ಪ್ರಯತ್ನ ನಿಲ್ಲಿಸುತ್ತಾರೆ. ದಡ್ಡರಾಗಿದ್ದರೆ ದೊಣ್ಣೆ ಏಟು ತಿನ್ನಲು ಸಜ್ಜಾಗುತ್ತಾರೆ’ ಎಂದರು.