ಸಾಹಿತಿ ಶ್ರೀಕಂಠ ಕೂಡಿಗೆ ಮಾತನಾಡಿ, ‘ಈ ಯೋಜನೆಯ ಹಿಂದೆ ರಾಜಕೀಯ ಉದ್ದೇಶವಿದೆ. ಲಿಂಗನಮಕ್ಕಿ ನೀರು ತುಮಕೂರು ಮಾರ್ಗವಾಗಿ ಸಾಗುವುದರಿಂದ ತುಮಕೂರಿಗೆ ನೀರು ಪೂರೈಸುವ ಉದ್ದೇಶದಿಂದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಈ ವಿಷಯದಲ್ಲಿ ವಿಶೇಷ ಆಸಕ್ತಿ ವಹಿಸಿರಬಹುದು. ಆದರೆ, ಇದೊಂದು ಅವೈಜ್ಞಾನಿಕವಾದ, ತರ್ಕಹೀನ, ಉದ್ದೇಶಪೂರ್ವಕ ಯೋಜನೆಯಾಗಿದ್ದು, ಇದನ್ನು ಹಿಂಪಡೆಯಲೇಬೇಕು’ ಎಂದು ಆಗ್ರಹಿಸಿದರು.