ಮಠದ ಆಶ್ರಯದಲ್ಲಿ ವಿದ್ಯಾಭ್ಯಾಸ ಮಾಡಿ, ಬದುಕು ರೂಪಿಸಿಕೊಂಡಿದ್ದ ಶಿಷ್ಯವರ್ಗ. ಸ್ವಾಮೀಜಿಗಳ ಆಶೀರ್ವಾದ ಪಡೆದು ಬದುಕು ಪರಿವರ್ತನೆ ಮಾಡಿಕೊಂಡಿದ್ದ ಭಕ್ತ ಸಮೂಹ ಹಾಗೂ ಲಿಂಗ ಪೂಜೆ, ಬಸವಣ್ಣನ ಮೌಲ್ಯಗಳನ್ನು ಆಚರಣೆಗೆ ತಂದು ತ್ರಿವಿಧ ದಾಸೋಹಿ ಎನಿಸಿದ ಸ್ವಾಮೀಜಿಯ ದರ್ಶನ ಪಡೆದು ಪುನೀತರಾಗಬೇಕೆನ್ನುವ ಜನರು ಅಂದು ನೆರೆದಿದ್ದರು.