ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ಮಂಡ್ಯ, ಹಾಸನ, ಕೋಲಾರ, ವಿಜಯನಗರ, ಕೊಪ್ಪಳ ಸಹಿತ ವಿವಿಧ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಬರುತ್ತಿರುವ ಇವರು ಚಾರ್ಮಾಡಿ ಘಾಟಿಯಲ್ಲಿ ಒಂದೇ ಕಡೆ ಸೇರುತ್ತಾರೆ. ನಂತರ ಅಲ್ಲಿಂದ ಒಂದೇ ಮಾರ್ಗದ ಮೂಲಕ ಧರ್ಮಸ್ಥಳಕ್ಕೆ ಸಾಗುತ್ತಾರೆ. ಶಿವರಾತ್ರಿ ಆಚರಣೆಯ ಸಂದರ್ಭ ಮಂಜುನಾಥ ಸ್ವಾಮಿ ದರ್ಶನ ಪಡೆಯಲು, ಹರಕೆ ತೀರಿಸಲು, ಭಕ್ತಿ ಸಮರ್ಪಣೆಗೆ, ಇಷ್ಟಾರ್ಥ ಸಿದ್ಧಿಗಾಗಿ ಧರ್ಮಸ್ಥಳಕ್ಕೆ ಬರುವುದೇ ಇವರ ಏಕೈಕ ಗುರಿ.