ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ’ಕೆರೆಗಳ ಅಕ್ರಮ ಒತ್ತುವರಿ ಮತ್ತು ದುರ್ಬಳಕೆ ಕುರಿತು ತನಿಖೆ ನಡೆಸುವ ಮುಖ್ಯಮಂತ್ರಿಯವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಯಾವೆಲ್ಲಾ ಕಾಲದಲ್ಲಿ ಕೆರೆಗಳ ಒತ್ತುವರಿ ಆಗಿದೆ? ಅದರ ಉದ್ದೇಶ ಏನಿತ್ತು? ಆಗ ಕೆರೆಗಳ ಸ್ಥಿತಿಗತಿ ಏನಾಗಿತ್ತು? ಈಗ ಏನಾಗಿದೆ? ಈ ಎಲ್ಲವನ್ನು ಒಳಗೊಂಡ ಒಂದು ವಿಸ್ತೃತ ತನಿಖೆ ನಡೆದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’ ಎಂದು ಅವರು ಹೇಳಿದ್ದಾರೆ.