ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಂ.ಎಸ್. ಶ್ಯಾಮಸುಂದರ್, ‘ಆರೋಪಿ ಈ ಪ್ರಕರಣ ಮಾತ್ರವಲ್ಲದೇ ಆರ್ಥಿಕ ಅಪರಾಧಗಳಲ್ಲೂ ಪೊಲಿಸರಿಗೆ ಬೇಕಿರುವ ವ್ಯಕ್ತಿಯಾಗಿದ್ದಾನೆ. ಒಂದು ವೇಳೆ ಆತ ಈ ಪ್ರಕರಣದಲ್ಲಿ ತಪ್ಪು ಮಾಡಿಲ್ಲ ಎಂದಾದರೆ ಪೊಲೀಸರಿಗೆ ಶರಣಾಗಲು ಏಕೆ ಭಯ’ ಎಂದು ಪ್ರಶ್ನಿಸಿದರು.