ಸಮ್ಮೇಳನದಲ್ಲಿಲ್ಲ ಆದ್ಯತೆ: ಜನವರಿ 6ರಿಂದ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಾವೇರಿಯವರೇ ಆದ ಗಳಗನಾಥರು ಹಾಗೂ ರಾಜಪುರೋಹಿತ ಅವರ ಹೆಸರಿನಲ್ಲಿ ಗೋಷ್ಠಿ ನಡೆಸುವಂತೆ ಅಥವಾ ಯಾವುದಾದರೂ ವೇದಿಕೆ, ದ್ವಾರಕ್ಕೆ ಹೆಸರು ಇಡುವಂತೆ ಮನವಿ ಮಾಡಿಕೊಂಡಿದ್ದೆವು. ಈ ಬಗ್ಗೆ ಪ್ರತಿಷ್ಠಾನದಿಂದಲೂ ಪತ್ರ ಬರೆಯಲಾಗಿತ್ತು. ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಕೊನೆಗಳಿಗೆಯಲ್ಲಿ ಕೈಬಿಟ್ಟಿದ್ದಾರೆ. ಇದರಿಂದ ನಿರಾಸೆಯಾಗಿದೆ ಎಂದು ಪ್ರೊ. ದುಷ್ಯಂತ ನಾಡಗೌಡ ಬೇಸರ ವ್ಯಕ್ತಪಡಿಸಿದರು.