ಕೆಂಗೇರಿ: ‘ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಬೆಳವಣಿಗೆಗೆ ಸಹಕಾರ ನೀಡುವ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ. ಯಾವುದೇ ಪಕ್ಷ ಬೆಂಬಲಿಸುವುದಿಲ್ಲ’ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.
ಕೆಂಗೇರಿ ಉಪನಗರದಲ್ಲಿ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕಳೆದ ಚುನಾವಣೆ ವೇಳೆ ಪಕ್ಷದಿಂದ ಅಮಾನತುಗೊಂಡಿದ್ದ ಯಶವಂತಪುರ ಕ್ಷೇತ್ರದ ಸ್ಥಳೀಯ ನಾಯಕ ಮಾರೇಗೌಡರ ಪಕ್ಷ ಸೇರ್ಪಡೆಯಿಂದ ಯಾವುದೇ ಮುಜುಗರವಾಗಿಲ್ಲ. 2028ರವರೆಗೆ ಕೇವಲ ಅಭಿವೃದ್ಧಿಗಷ್ಟೇ ಗಮನಹರಿಸಲಾಗುವುದು. ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ’ ಎಂದರು.
ಆಡಳಿತ ಪಕ್ಷದ ಸದಸ್ಯರು ಬಜೆಟ್ ಅನ್ನು ವಿಶೇಷ ಎಂದು ಬಣ್ಣಿಸುತ್ತಾರೆ. ವಿರೋಧ ಪಕ್ಷಗಳು ನೀರಸವೆಂದು ಟೀಕಿಸುತ್ತಾರೆ. ಇದೊಂದು ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದರು.