ಕೇಂದ್ರ ಸರ್ಕಾರವು 2025ರ ಜನವರಿ 2ರಂದು ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ, ಸಚಿವರ ಸಭೆ ನಡೆಸುವ ಮೂಲಕ ಮಾತುಕತೆಯಿಂದಲೇ ಜಲ ವಿವಾದ ಪರಿಹರಿಸಲು ರಾಜ್ಯಗಳಿಗೆ ಇನ್ನೊಂದು ಅವಕಾಶ ನೀಡಬೇಕು. ಇದೊಂದು ಸಣ್ಣ ವಿವಾದ. ನ್ಯಾಯಮಂಡಳಿ ರಚಿಸುವ ಅಗತ್ಯವೇ ಇಲ್ಲ.
ಮೋಹನ್ ವಿ.ಕಾತರಕಿ, ಕರ್ನಾಟಕ ಸರ್ಕಾರದ ಪರ ಹಿರಿಯ ವಕೀಲ
ರಾಜ್ಯವು ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿ ಆರು ವರ್ಷಗಳು ಕಳೆದಿವೆ. ಸಂಧಾನದ ಹೆಸರಿನಲ್ಲಿ ಕಾಲಹರಣ ಮಾಡಲಾಗುತ್ತಿದೆ. ಸೌಹಾರ್ದಯುತ ವಾಗಿ ವಿವಾದ ಬಗೆಹರಿಸಲು ಎರಡು ಸಂಧಾನ ಸಮಿತಿಗಳು ಪ್ರಯತ್ನ ನಡೆಸಿದ್ದವು. ಮಾತುಕತೆ ವಿಫಲವಾಗಿರುವುದರಿಂದ ನ್ಯಾಯಮಂಡಳಿ ರಚನೆಯ ಆದೇಶ ಹೊರಡಿಸಲು ಸಮಯ ಕೂಡಿ ಬಂದಿದೆ.