<p><strong>ಕಲಬುರ್ಗಿ: </strong>‘ಜಾತಿ ವ್ಯವಸ್ಥೆ ಸರಿಯಲ್ಲ, ಅದರ ನಿರ್ಮೂಲನೆ ಮಾಡಬೇಕು ಎಂದು ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುತ್ತಾರೆ. ಆದರೆ, ಮಾರನೇ ದಿನವೇ ಜಾತಿ ಪ್ರಮಾಣ ಪತ್ರ ತರುವಂತೆ ಹೇಳುತ್ತಾರೆ. ನಾವು ಏನನ್ನು ನಂಬಬೇಕು..?’</p>.<p>ನಗರದ ರೋಟರಿ ಕ್ಲಬ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸಾಕ್ಷಿ ಅವರು ಈ ಪ್ರಶ್ನೆ ಕೇಳುವ ಮೂಲಕ ಸಚಿವರನ್ನು ಪೇಚಿಗೆ ಸಿಕ್ಕಿಸಿದರು.</p>.<p>ಮಕ್ಕಳಿಗೆ ಕೆಲವು ನೀತಿ ಪಾಠ ಬೋಧಿಸಿದ ಸುರೇಶಕುಮಾರ್ ಅವರು, ಸಂವಾದದಲ್ಲಿ ಪ್ರಶ್ನೆ ಕೇಳಲು ಹೇಳಿದರು. ಆಗ ಎದ್ದುನಿಂತ ವಿದ್ಯಾರ್ಥಿನಿ ಸಚಿವರತ್ತ ಈ ಪ್ರಶ್ನೆ ತೂರಿದರು.</p>.<p>ಇದಕ್ಕೆ ಚುಟುಕಾಗಿ ಉತ್ತರಿಸಿದ ಸಚಿವ, ‘ದೊಡ್ಡವರಿಗೂ ಇದೂವರೆಗೆ ಹೊಳೆಯದಂಥ ವಿಚಾರವನ್ನು ಕೇಳಿದ್ದೀರಿ. ವೆರಿ ಗುಡ್. ಇದಕ್ಕೆ ನಾನೂ ಉತ್ತರಿಸಲು ಅಸಾಧ್ಯವೆನಿಸುತ್ತದೆ. ಇದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಾದ ಸಂಗತಿ’ ಎನ್ನುತ್ತ ವಿದ್ಯಾರ್ಥಿನಿಯ ಬೆನ್ನುತಟ್ಟಿದರು.</p>.<p>ಭ್ರಷ್ಟಾಚಾರ ನಿರ್ಮೂಲನೆ, ಶಿಕ್ಷಣ ಸುಧಾರಣೆ ಸೇರಿದಂತೆ ವಿವಿಧ ಪ್ರಶ್ನೆಗಳನ್ನು ಮಕ್ಕಳು ಕೇಳಿದರು. ಎಲ್ಲರಿಗೂ ಸಮಾಧಾನದಿಂದಲೇ ಉತ್ತರಿಸಿದ ಸಚಿವ, ‘ಈ ಕಾರ್ಯಕ್ರಮ ಮಕ್ಕಳಿಗೆ ಮಾತ್ರ ಸೀಮಿತ. ಇಲ್ಲಿ ಹಾರ– ತುರಾಯಿ– ಸನ್ಮಾನ ಏನೂ ಬೇಡ’ ಎಂದು ಸರಳತೆ ಮೆರೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>‘ಜಾತಿ ವ್ಯವಸ್ಥೆ ಸರಿಯಲ್ಲ, ಅದರ ನಿರ್ಮೂಲನೆ ಮಾಡಬೇಕು ಎಂದು ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುತ್ತಾರೆ. ಆದರೆ, ಮಾರನೇ ದಿನವೇ ಜಾತಿ ಪ್ರಮಾಣ ಪತ್ರ ತರುವಂತೆ ಹೇಳುತ್ತಾರೆ. ನಾವು ಏನನ್ನು ನಂಬಬೇಕು..?’</p>.<p>ನಗರದ ರೋಟರಿ ಕ್ಲಬ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸಾಕ್ಷಿ ಅವರು ಈ ಪ್ರಶ್ನೆ ಕೇಳುವ ಮೂಲಕ ಸಚಿವರನ್ನು ಪೇಚಿಗೆ ಸಿಕ್ಕಿಸಿದರು.</p>.<p>ಮಕ್ಕಳಿಗೆ ಕೆಲವು ನೀತಿ ಪಾಠ ಬೋಧಿಸಿದ ಸುರೇಶಕುಮಾರ್ ಅವರು, ಸಂವಾದದಲ್ಲಿ ಪ್ರಶ್ನೆ ಕೇಳಲು ಹೇಳಿದರು. ಆಗ ಎದ್ದುನಿಂತ ವಿದ್ಯಾರ್ಥಿನಿ ಸಚಿವರತ್ತ ಈ ಪ್ರಶ್ನೆ ತೂರಿದರು.</p>.<p>ಇದಕ್ಕೆ ಚುಟುಕಾಗಿ ಉತ್ತರಿಸಿದ ಸಚಿವ, ‘ದೊಡ್ಡವರಿಗೂ ಇದೂವರೆಗೆ ಹೊಳೆಯದಂಥ ವಿಚಾರವನ್ನು ಕೇಳಿದ್ದೀರಿ. ವೆರಿ ಗುಡ್. ಇದಕ್ಕೆ ನಾನೂ ಉತ್ತರಿಸಲು ಅಸಾಧ್ಯವೆನಿಸುತ್ತದೆ. ಇದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಾದ ಸಂಗತಿ’ ಎನ್ನುತ್ತ ವಿದ್ಯಾರ್ಥಿನಿಯ ಬೆನ್ನುತಟ್ಟಿದರು.</p>.<p>ಭ್ರಷ್ಟಾಚಾರ ನಿರ್ಮೂಲನೆ, ಶಿಕ್ಷಣ ಸುಧಾರಣೆ ಸೇರಿದಂತೆ ವಿವಿಧ ಪ್ರಶ್ನೆಗಳನ್ನು ಮಕ್ಕಳು ಕೇಳಿದರು. ಎಲ್ಲರಿಗೂ ಸಮಾಧಾನದಿಂದಲೇ ಉತ್ತರಿಸಿದ ಸಚಿವ, ‘ಈ ಕಾರ್ಯಕ್ರಮ ಮಕ್ಕಳಿಗೆ ಮಾತ್ರ ಸೀಮಿತ. ಇಲ್ಲಿ ಹಾರ– ತುರಾಯಿ– ಸನ್ಮಾನ ಏನೂ ಬೇಡ’ ಎಂದು ಸರಳತೆ ಮೆರೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>