‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರ ಸುತ್ತಾಟದ ಸಂದರ್ಭದಲ್ಲಿ ಇಲ್ಲಿ ಕಳೆಗುಂದಿದ್ದ ರಾಜೀವ್ಗಾಂಧಿ ಪ್ರತಿಮೆಯನ್ನು ನೋಡಿದ್ದರು. ಕೂಡಲೇ ಅದನ್ನು ತೆರವುಗೊಳಿಸಿ, ಹೊಸದಾಗಿ ಪ್ರತಿಮೆ ಸ್ಥಾಪಿಸಲು ಸೂಚಿಸಿದ್ದರು. ಹೈದರಾಬಾದ್ನಲ್ಲಿ ಕಂಚಿನ ಪ್ರತಿಮೆಯನ್ನು ತಯಾರಿಸಲಾಗಿದ್ದು, ಅಲ್ಲಿಂದ ಟ್ರಕ್ ಮೂಲಕ ತಂದು, ಕ್ರೇನ್ ಸಹಾಯದಿಂದ ಅಳವಡಿಸಲಾಗಿದೆ. ಜಂಕ್ಷನ್ ಅಭಿವೃದ್ಧಿ ಕೆಲಸ ಒಂದೆರಡು ವಾರಗಳಲ್ಲಿ ಮುಗಿಯಲಿದ್ದು, ನಂತರ ಪ್ರತಿಮೆ ಅನಾವರಣಗೊಳಿಸಲಾಗುವುದು. ಮೆಟ್ಟಿಲು, ಪೀಠ ಸೇರಿ 25 ಅಡಿ ಎತ್ತರವಿರಲಿದ್ದು, ಇದು ರಾಜ್ಯದಲ್ಲೇ ಅತಿ ಎತ್ತರದ ರಾಜೀವ್ ಗಾಂಧಿ ಕಂಚಿನ ಪ್ರತಿಮೆಯಾಗಲಿದೆ’ ಎಂದು ಮಾಹಿತಿ ನೀಡಿದರು.