ಬೆಂಗಳೂರು: ಸಮಯ ಮೀರಿದೆ ಪ್ರಚಾರ ಸಭೆ ಮುಕ್ತಾಯಗೊಳಿಸಿ ಎಂದು ಹೇಳಿದ ಚುನಾವಣಾ ಆಯೋಗದ ಅಧಿಕಾರಿಗಳ ಜತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಶುಕ್ರವಾರ ವಾಗ್ವಾದ ನಡೆಸಿದರು.
ಬಸವನಗುಡಿಯಲ್ಲಿನ ಸಂಜೆ 7ಕ್ಕೆ ನಿಗಧಿಯಾಗಿದ್ದ ಸಭೆಗೆ ತೇಜಸ್ವಿ ಸೂರ್ಯ ರಾತ್ರಿ 9ಕ್ಕೆ ಬಂದು ಮಾತು ಆರಂಭಿಸಿದರು. ಚುನಾವಣಾ ನೀತಿ ಸಂಹಿತೆ ಪ್ರಕಾರ 9 ಗಂಟೆಗೆ ಪ್ರಚಾರದ ಅವಧಿ ಮುಗಿದಿದ್ದು, ಸಭೆ ಮುಗಿಸುವಂತೆ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿಗಳು ತಿಳಿಸಿದರು.
ಆದರೂ ತೇಜಸ್ವಿ ಮಾತು ಮುಂದುವರಿಸಿದಾಗ ಅಧಿಕಾರಿಗಳು ಸೈರನ್ ಹಾಕಿ ಸಭೆ ಮುಗಿಸುವಂತೆ ಸೂಚನೆ ನೀಡಿದರು. ಆಗ ಮಾತು ನಿಲ್ಲಿಸಿ ಅವರು ವೇದಿಕೆಯಿಂದಕೆಳಗಿಳಿದರು.