ಬೆಂಗಳೂರು: ಉಪ ಪೊಲೀಸ್ ಆಯುಕ್ತ ಡಾ ಅನೂಪ್ ಎ. ಶೆಟ್ಟಿ ಸೇರಿದಂತೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಐಜಿಪಿ ಎಸ್.ಎನ್. ಸಿದ್ದರಾಮಪ್ಪ ಅವರನ್ನು ಬೆಳಗಾವಿಯ ಆಯುಕ್ತರ ಕಚೇರಿಯ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಅಪರಾಧ ದಾಖಲೆಗಳ ಬ್ಯೂರೊದ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವರ್ತಿಕಾ ಕಟಿಯಾರ್ ಅವರನ್ನು ಬೆಂಗಳೂರಿನಲ್ಲಿರುವ ಆಂತರಿಕ ಭದ್ರತಾ ವಿಭಾಗದ ಎಸ್ಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಈ ಸ್ಥಾನದಲ್ಲಿದ್ದ ಡಾ. ಡಿ.ಆರ್.ಸಿರಿ ಗೌರಿ ಅವರನ್ನು ಡಾ. ಅನೂಪ್ ಎ. ಶೆಟ್ಟಿ ಅವರ ಸ್ಥಾನಕ್ಕೆ (ಉಪ ಪೊಲೀಸ್ ಆಯುಕ್ತ) ವರ್ಗಾವಣೆ ಮಾಡಲಾಗಿದೆ.
ಉಪ ಪೊಲೀಸ್ ಆಯುಕ್ತ (ಡಿಸಿಪಿ) ಡಾ. ಅನೂಪ್ ಎ. ಶೆಟ್ಟಿ ಅವರನ್ನು ಸೈಬರ್ ಅಪರಾಧ ತನಿಖಾ ವಿಭಾಗದ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.