ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ವಿಜಯನಗರವೂ ಒಂದು. ಇಲ್ಲಿನ 3ನೇ ಹಂತದ ‘ಸಿ’ ಬ್ಲಾಕ್ ನಲ್ಲಿ ಒಂದು ಬೃಹತ್ ಉದ್ಯಾನವಿದೆ. ಅದನ್ನೀಗ ಉದ್ಯಾನ ಎಂದರೆ ತಪಾಗುತ್ತದೆ. ಲಂಟಾನಾ ಹಾಗೂ ಮುಳ್ಳಿನ ಗಿಡಗಳಿಂದ ಆವೃತವಾದ ಕುರುಚಲು ಕಾಡು ಎಂತಲೋ, ಹುಲ್ಲುಗಾಲವು ಎಂತಲೋ ಕರೆಯಬಹುದು. ಈ ಉದ್ಯಾನವು ಈಗ ಹಾವು, ಚೇಳಿನಂತಹ ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಸ್ಥಳೀಯರು ಪ್ರಾಣ ಭೀತಿಯಿಂದಾಗಿ ಈ ಉದ್ಯಾನದೊಳಗೆ ಪ್ರವೇಶಿಸಲು ಹಿಂದೇಟು ಹಾಕುತ್ತಿದ್ದಾರೆ.