‘ನಾನು ಬಹಳ ಕಾಲದಿಂದ ಮಧುಮೇಹಿ. ಹಾಗಾಗಿ ಪಾಸಿಟಿವ್ ಬಂದಾಗ ನನಗೆ ಗೊತ್ತಿರುವ ವೈದ್ಯರ ಸಲಹೆ ಕೇಳಿದೆ. ಬೆಂಗಳೂರಿಗೆ ಹೋಗೋದು ಉತ್ತಮ ಎಂದು ತಿಳಿಸಿದರು. ಮುಖ್ಯಮಂತ್ರಿಗಳ ನೆರವು ಪಡೆದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾದೆ. ಅಲ್ಲಿ ವೈದ್ಯರು, ಶುಶ್ರೂಷಕರು ಚೆನ್ನಾಗಿ ನೋಡಿಕೊಂಡರು. ಆಸ್ಪತ್ರೆಯಿಂದ ಬಿಡುಗಡೆ ಆದ ಮೇಲೆ ಮತ್ತೆ ಒಂದು ವಾರ ಹೋಂ ಕ್ವಾರಂಟೈನ್ನಲ್ಲಿ ಉಳಿದೆ. ದೇವರ, ನನ್ನ ಕ್ಷೇತ್ರದ ಜನರ, ಸ್ನೇಹಿತರ ಆಶೀರ್ವಾದದಿಂದ ಯಾವುದೇ ತೊಂದರೆ ಇಲ್ಲದೇ ಆರೋಗ್ಯವಾಗಿದ್ದೇನೆ. ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದೇನೆ. ಸಭೆಗಳಲ್ಲಿ ಭಾಗವಹಿಸುತ್ತಿದ್ದೇನೆ’ ಎಂದು ತಿಳಿಸಿದರು.