‘ಸಚಿವ ರೇವಣ್ಣ ಅವರ ಇಲಾಖೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನೂ ನಿಭಾಯಿಸುವ ತಿಪ್ಪೇಸ್ವಾಮಿ, ಒಂದು ರೀತಿಯಲ್ಲಿ ಬಲಗೈ ಬಂಟನಂತಿದ್ದಾರೆ. ಬಹಳ ಕಾಲದಿಂದ ಜತೆಯಲ್ಲೇ ಇರುವ ಇವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂಬುದು ರೇವಣ್ಣ ಅವರ ಉದ್ದೇಶ. ಇದನ್ನು ದೇವೇಗೌಡರಾಗಲಿ, ಕುಮಾರಸ್ವಾಮಿ ಆಗಲಿ ತಳ್ಳಿ ಹಾಕಲು ಸಾಧ್ಯವಿಲ್ಲ’ ಎಂದು ಪಕ್ಷದ ಮೂಲಗಳು ತಿಳಿಸಿವೆ.