ಅಸ್ಥಿ ವಿಸರ್ಜನೆ ಕೊಡವ ಸಂಸ್ಕೃತಿ, ಸಂಪ್ರದಾಯದ ಒಂದು ಭಾಗವಾಗಿದ್ದು, ವ್ಯಕ್ತಿ ಮೃತನಾದ 16 ದಿನಗಳಲ್ಲಿ ಅಸ್ಥಿ ವಿಸರ್ಜನೆ ಮಾಡಬೇಕು. ತ್ರಿವೇಣಿ ಸಂಗಮದಲ್ಲಿ ವಿಷ್ಣು ಸಾನ್ನಿಧ್ಯವಿರುವ ಕಾರಣ ಆ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವಿದೆ. ಕೊರೊನಾ ಕಾರಣ ಹಾಗೂ ಸ್ವಾಭಾವಿಕವಾಗಿ ಹೆಚ್ಚಿನ ಜನ ಕಳೆದೆರಡು ತಿಂಗಳಲ್ಲಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಜನ ಸೇರಿದಂತೆ ಬೆಂಗಳೂರು, ಮೈಸೂರು ಹಾಗೂ ಹೊರ ಊರಿನಲ್ಲಿ ನೆಲೆಸಿರುವ ಜನರೂ ಅಸ್ಥಿ ವಿಸರ್ಜನೆಗೆ ಭಾಗಮಂಡಲಕ್ಕೆ ಆಗಮಿಸುತ್ತಾರೆ. ಅಸ್ಥಿ ವಿಸರ್ಜನೆಗೆ ಅವಕಾಶ ಕೋರಿ ಹಲವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.