‘ಮಂಜುನಾಥಯ್ಯ ಒಬ್ಬ ರೌಡಿ. ವಿಚಾರಣೆಗೆ ಒಳಪಡಿಸಿದಾಗ, ಆತ, ಪಬ್ಲಿಕ್ ಟಿವಿ ವರದಿಗಾರರೇ ಹಾಗೆ ಮಾಡಿದ್ದು ಎಂದು ಆರೋಪಿಸಿದ್ದ. ನಂತರ, ನಾಗಭೂಷಣ ಅವರೂ ಪ್ರಕರಣದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂತು. ಮಂಜುನಾಥಯ್ಯ ಜೊತೆಗೆ ವರದಿಯಲ್ಲಿ ಕಾಣಿಸಿಕೊಂಡಿರುವ ಮೂರನೇ ಆರೋಪಿ ವೀರೇಶ್, ಮಂಜುನಾಥಯ್ಯ ಅವರ ಪ್ರವೇಶ ಪತ್ರದ ಇನ್ನೊಂದು ಪ್ರತಿಯನ್ನು ತಮ್ಮದೇ ಎಂಬಂತೆ ಪ್ರದರ್ಶಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಭಾವಚಿತ್ರವುಳ್ಳ ಪ್ರವೇಶ ಪತ್ರ ನಕಲಿಯಾದದ್ದು ಎಂದು ಗೊತ್ತಿದ್ದೂ ವರದಿಗಾರರು ವರದಿ ಮಾಡಿದ್ದಾರೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ’ ಎಂದರು.