ಬುಧವಾರ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಪಲಿಮಾರು ಶ್ರೀಗಳು, ‘ಪಲಿಮಾರು ಮಠಕ್ಕೆ ಉತ್ತರಾಧಿಕಾರಿಯ ಅನ್ವೇಷಣೆಯಲ್ಲಿ ತೊಡಗಿದ್ದಾಗ ಯೋಗದೀಪಿಕ ವಿದ್ಯಾಪೀಠದಲ್ಲಿ ಹುಡುಗನೊಬ್ಬನ ಮೇಲೆ ದೃಷ್ಟಿ ಹರಿಯಿತು. ಕೂಡಲೇ ವಿದ್ಯಾರ್ಥಿಯ ಜಾತಕವನ್ನು ಪರಿಶೀಲನೆ ಮಾಡಲು ಮೂವರು ವಿದ್ವಾಂಸರಿಗೆ ಕಳುಹಿಸಿಕೊಡಲಾಯಿತು. ಜಾತಕ ಕೂಡಿಬಂದ ಹಿನ್ನೆಲೆಯಲ್ಲಿ ವಟುವಿನ ಹಾಗೂ ಪೋಷಕರ, ಸಂಬಂಧಿಗಳ ಒಪ್ಪಿಗೆ ಪಡೆದು ಮುಂದಿನ ಉತ್ತರಾಧಿಕಾರಿಯನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದರು.