ರೆಡ್ಡಿ ಮನೆಯಲ್ಲಿ ಉಪಾಹಾರ: ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಬಸವೇಶ್ವರ ನಗರದ ಮನೆ ಸಮೀಪದ ಉದ್ಯಾನದಲ್ಲಿ ಎಂದಿನಂತೆ ವಾಕಿಂಗ್, ಧ್ಯಾನ ಮಾಡಿದರು. ಕೋಟೆ ಮಲ್ಲೇಶ್ವರ ಗುಡಿ, ದುರ್ಗಮ್ಮ ಗುಡಿಗೆ ಭೇಟಿ ನೀಡಿದರು.ನಂತರ ತಮ್ಮ ಆಪ್ತ, ಮಾಜಿ ಶಾಸಕ ಶಿವರಾಮರೆಡ್ಡಿ ಅವರ ಆಹ್ವಾನದ ಮೇರೆಗೆ ಅವರ ಮನೆಗೆ ತೆರಳಿ ಉಪಾಹಾರ ಸ್ವೀಕರಿಸಿದರು.