ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ಹಿಂದೂಗಳ ನಂಬಿಕೆ, ಶ್ರದ್ಧೆಯ ವಿಷಯವಾಗಿದ್ದು, ಸರ್ಕಾರಿ ಟ್ರಸ್ಟ್ ಆಗಬಾರದು. ಸ್ವತಂತ್ರ ಟ್ರಸ್ಟ್ ರಚನೆ ಆಗಬೇಕು. ಅಲ್ಲಿ ಸಂಗ್ರಹಿಸಿರುವ ಕಲ್ಲುಗಳಿಂದಲೇ ಮಂದಿರ ಆಗಬೇಕು. ಸಾರ್ವಜನಿಕರ ಹಣದಲ್ಲಿಯೇ ಮಂದಿರ ನಿರ್ಮಾಣ ಆಗಬೇಕು. ಈ ಎಲ್ಲ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.