ಈ ವಿಚಾರವಾಗಿ ಪ್ರಕಟವಾದ ಪ್ರಜಾವಾಣಿ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕೆಪಿಸಿಸಿ, ‘ಕೋವಿಡ್ ಸಂದರ್ಭದಲ್ಲಿ ಸೋಂಕಿತರ ಪರದಾಟ ನೋಡಿದ್ದೆವು, ಆದರೆ ಈಗಿನ ಸ್ಥಿತಿ ಅದಕ್ಕಿಂತ ಭೀಕರವಾಗಿದೆ. ರೋಗಿಗಳಿಗೆ ಬೆಡ್ ಸಿಗುತ್ತಿಲ್ಲ. ದಾಖಲಾತಿಯಾಗುತ್ತಿಲ್ಲ. ಈ ಮಟ್ಟಿಗೆ ಆರೋಗ್ಯ ಕ್ಷೇತ್ರವನ್ನು ಸರ್ಕಾರ ಹದಗೆಡಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.