ಜೆಡಿಎಸ್ನಿಂದ ಅಂತರ ಕಾಯ್ದುಕೊಂಡಿರುವ ಜಿ.ಟಿ.ದೇವೇಗೌಡ, ಸದ್ಯಕ್ಕೆ ತಟಸ್ಥ ನಿಲುವು ತೆಗೆದುಕೊಂಡಿದ್ದು, ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು. ಆದರೆ, ಬಿಜೆಪಿ ಪರ ಮೃದು ಧೋರಣೆ ತಳೆದಿರುವ ಅವರ ಬೆಂಬಲ ಗಿಟ್ಟಿಸಲು ವಿಶ್ವನಾಥ್ ಹಾಗೂ ಪಕ್ಷದ ಇತರ ಮುಖಂಡರು ಪ್ರಯತ್ನಿಸಿದ್ದಾರೆ.