<p><strong>ಬೆಂಗಳೂರು: </strong>ವೈಲ್ಡ್ಲೈಫ್ ಕನ್ಸರ್ವೇಷನ್ ಸೊಸೈಟಿಯಿಂದ (ಡಬ್ಲ್ಯುಸಿಎಸ್) ನಿವೃತ್ತರಾಗುತ್ತಿರುವ ಡಾ.ಕೆ.ಉಲ್ಲಾಸ ಕಾರಂತ ಅವರಿಗೆ ವನ್ಯಜೀವಿ ಸಂರಕ್ಷಣಾ ವಿಜ್ಞಾನಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ಸಂಸ್ಥೆಯ ವತಿಯಿಂದ ಜಾರ್ಜ್ ಷಾಲರ್ ಜೀವಮಾನ ಪ್ರಶಸ್ತಿ ನೀಡಲಾಗಿದೆ.</p>.<p>ಜಗತ್ತಿನ ಶ್ರೇಷ್ಠ ವನ್ಯಜೀವಿ ವಿಜ್ಞಾನಿ ಮತ್ತು ಸಂರಕ್ಷಣಾವಾದಿಗಳಲ್ಲಿ ಒಬ್ಬರಾದ ಜಾರ್ಜ್ ಷಾಲರ್ ಹೆಸರಿನಲ್ಲಿ ಡಬ್ಲ್ಯುಸಿಎಸ್ ಉದ್ಯೋಗಿಗಳಿಗೆ ನೀಡುವ ಈ ಪ್ರಶಸ್ತಿಗೆ, ವನ್ಯಜೀವಿ ಮತ್ತು ಅಭಯಾರಣ್ಯ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದವರನ್ನು ಆಯ್ಕೆ ಮಾಡಲಾಗುತ್ತದೆ.</p>.<p>ನ್ಯೂಯಾರ್ಕ್ನಲ್ಲಿ ಅ. 29ರಂದು ನಡೆದ ಸಮಾರಂಭದಲ್ಲಿ ಕಾರಂತ ಅವರು ಪ್ರಶಸ್ತಿ ಸ್ವೀಕರಿಸಿದರು. ಈ ಪ್ರಶಸ್ತಿಗೆ ಭಾಜನರಾದ ಮೊದಲ ವ್ಯಕ್ತಿ ಎಂಬ ಶ್ರೇಯ ಅವರದು.</p>.<p>‘1988ರಿಂದ ಉಲ್ಲಾಸ ಅವರ ಜೊತೆ ಒಡನಾಟ ಹೊಂದಿದ್ದೇನೆ. ಅವರ ವೃತ್ತಿ ಜೀವನದ ಆರಂಭದಿಂದಲೂ ಅವರಿಗೆ ಮಾರ್ಗದರ್ಶಿಯಾಗಿದ್ದುದು ಹೆಮ್ಮೆಯ ವಿಚಾರ. ದೊಡ್ಡ ಮಾಂಸಾಹಾರಿ ಪ್ರಾಣಿಗಳ ಸಂಶೋಧನೆ ಮತ್ತು ಸಂರಕ್ಷಣೆಯಲ್ಲಿ ಉಲ್ಲಾಸ ಕಾರಂತರು ಉತ್ತಮ ಕೆಲಸ ಮಾಡಿದ್ದಾರೆ’ ಎಂದು ಜಾರ್ಜ್ ಷಾಲರ್ ಹೇಳಿದರು.</p>.<p>ಉಲ್ಲಾಸ ಅವರು 1988ರಲ್ಲಿ ಡಬ್ಲ್ಯುಸಿಎಸ್ ಸೇರಿದ್ದರು. ಥಾಯ್ಲೆಂಡ್, ಮಲೇಷ್ಯಾ, ಕಾಂಬೋಡಿಯಾ, ಲಾವೋ, ಬರ್ಮಾ, ಇಂಡೋನೇಷ್ಯಾ, ರಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಹುಲಿಗಳ ಪರಿಸರ ವಿಜ್ಞಾನ ಕುರಿತ ಸಂಶೋಧನೆಗಳಿಗೆ ಅವರು ಮಾರ್ಗದರ್ಶನ ಮಾಡಿದ್ದರು. ನೂರಾರು ವೈಜ್ಞಾನಿಕ ಲೇಖನಗಳನ್ನು ಸಿದ್ಧಪಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ವೈಲ್ಡ್ಲೈಫ್ ಕನ್ಸರ್ವೇಷನ್ ಸೊಸೈಟಿಯಿಂದ (ಡಬ್ಲ್ಯುಸಿಎಸ್) ನಿವೃತ್ತರಾಗುತ್ತಿರುವ ಡಾ.ಕೆ.ಉಲ್ಲಾಸ ಕಾರಂತ ಅವರಿಗೆ ವನ್ಯಜೀವಿ ಸಂರಕ್ಷಣಾ ವಿಜ್ಞಾನಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ಸಂಸ್ಥೆಯ ವತಿಯಿಂದ ಜಾರ್ಜ್ ಷಾಲರ್ ಜೀವಮಾನ ಪ್ರಶಸ್ತಿ ನೀಡಲಾಗಿದೆ.</p>.<p>ಜಗತ್ತಿನ ಶ್ರೇಷ್ಠ ವನ್ಯಜೀವಿ ವಿಜ್ಞಾನಿ ಮತ್ತು ಸಂರಕ್ಷಣಾವಾದಿಗಳಲ್ಲಿ ಒಬ್ಬರಾದ ಜಾರ್ಜ್ ಷಾಲರ್ ಹೆಸರಿನಲ್ಲಿ ಡಬ್ಲ್ಯುಸಿಎಸ್ ಉದ್ಯೋಗಿಗಳಿಗೆ ನೀಡುವ ಈ ಪ್ರಶಸ್ತಿಗೆ, ವನ್ಯಜೀವಿ ಮತ್ತು ಅಭಯಾರಣ್ಯ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದವರನ್ನು ಆಯ್ಕೆ ಮಾಡಲಾಗುತ್ತದೆ.</p>.<p>ನ್ಯೂಯಾರ್ಕ್ನಲ್ಲಿ ಅ. 29ರಂದು ನಡೆದ ಸಮಾರಂಭದಲ್ಲಿ ಕಾರಂತ ಅವರು ಪ್ರಶಸ್ತಿ ಸ್ವೀಕರಿಸಿದರು. ಈ ಪ್ರಶಸ್ತಿಗೆ ಭಾಜನರಾದ ಮೊದಲ ವ್ಯಕ್ತಿ ಎಂಬ ಶ್ರೇಯ ಅವರದು.</p>.<p>‘1988ರಿಂದ ಉಲ್ಲಾಸ ಅವರ ಜೊತೆ ಒಡನಾಟ ಹೊಂದಿದ್ದೇನೆ. ಅವರ ವೃತ್ತಿ ಜೀವನದ ಆರಂಭದಿಂದಲೂ ಅವರಿಗೆ ಮಾರ್ಗದರ್ಶಿಯಾಗಿದ್ದುದು ಹೆಮ್ಮೆಯ ವಿಚಾರ. ದೊಡ್ಡ ಮಾಂಸಾಹಾರಿ ಪ್ರಾಣಿಗಳ ಸಂಶೋಧನೆ ಮತ್ತು ಸಂರಕ್ಷಣೆಯಲ್ಲಿ ಉಲ್ಲಾಸ ಕಾರಂತರು ಉತ್ತಮ ಕೆಲಸ ಮಾಡಿದ್ದಾರೆ’ ಎಂದು ಜಾರ್ಜ್ ಷಾಲರ್ ಹೇಳಿದರು.</p>.<p>ಉಲ್ಲಾಸ ಅವರು 1988ರಲ್ಲಿ ಡಬ್ಲ್ಯುಸಿಎಸ್ ಸೇರಿದ್ದರು. ಥಾಯ್ಲೆಂಡ್, ಮಲೇಷ್ಯಾ, ಕಾಂಬೋಡಿಯಾ, ಲಾವೋ, ಬರ್ಮಾ, ಇಂಡೋನೇಷ್ಯಾ, ರಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಹುಲಿಗಳ ಪರಿಸರ ವಿಜ್ಞಾನ ಕುರಿತ ಸಂಶೋಧನೆಗಳಿಗೆ ಅವರು ಮಾರ್ಗದರ್ಶನ ಮಾಡಿದ್ದರು. ನೂರಾರು ವೈಜ್ಞಾನಿಕ ಲೇಖನಗಳನ್ನು ಸಿದ್ಧಪಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>