ಮಠದ ಪೀಠಾಧಿಕಾರಿ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಪೂರ್ವ ಪರಂಪರೆಯಂತೆ ಮಠದಲ್ಲಿ ದೇವ-ಗುರು-ಶಾಸ್ತ್ರಗಳಲ್ಲಿ ವಿಶೇಷ ನಿಷ್ಠೆ, ಜೈನಧರ್ಮ-ಸಂಸ್ಕೃತಿ- ಪರಂಪರೆ- ಚರಿತ್ರೆಗಳ ಅಧ್ಯಯನ- –ಆಧ್ಯಾಪನ ಕಾರ್ಯ ನಿರಂತರವಾಗಿ ಸಾಗಲಿ. ಪ್ರತಿಯೊಬ್ಬರು ಅಹಿಂಸಾ ಧರ್ಮ ಪರಿಪಾಲನೆ ಮಾಡುತ್ತ ಸತ್ ಚಿಂತನೆ ಮೈಗೂಡಿಸಿಕೊಳ್ಳಬೇಕು’ ಎಂದರು.