‘ಅಲ್ಪಸ್ವಲ್ಪ ಜಮೀನಿದೆ. ಅದರಲ್ಲಿ ಬರುವ ಆದಾಯ ಸಾಲದು. ಹೊರಗೆ ಕೆಲಸಕ್ಕೆ ಹೋಗುತ್ತೇನೆ. ಪುತ್ರನೂ ಖರ್ಚಿಗೆಂದು ಒಂದಷ್ಟು ಹಣ ನೀಡುತ್ತಾನೆ. ಖರ್ಚು ಮಾಡುವಾಗ ಪುತ್ರನ ದುಡಿಮೆಯೇ ಕಣ್ಮುಂದೆ ಬರುತ್ತದೆ. ದೇಶ ಉಳಿದರೆ ನಾವು. ಹೀಗಾಗಿ, ಸಂಬಂಧಿಕರಲ್ಲಿ ಹಾಗೂ ಗ್ರಾಮಸ್ಥರಲ್ಲಿ ನನ್ನ ಪುತ್ರನ ಸೇವೆಯ ಬಗ್ಗೆ ಗೌರವವಿದೆ’ ಎಂದು ಸ್ಮರಿಸುತ್ತಾರೆ.