‘ಕೆಲವೊಮ್ಮೆ ಇದ್ದಕ್ಕಿದ್ದಂತೆ ಮಗನ ನೆನಪಾಗುತ್ತದೆ. ಆತನಿಗೆ ಕರೆ ಮಾಡಿದರೆ ಎಷ್ಟೋ ಬಾರಿ ಸ್ವೀಕರಿಸುವುದಿಲ್ಲ. ಒಮ್ಮೊಮ್ಮೆ ನಾಟ್ ರೀಚೇಬಲ್ ಆಗಿರುತ್ತದೆ. ಒಂದೊಮ್ಮೆ ಕರೆ ಸ್ವೀಕರಿಸಿದರೂ ಆ ಬಳಿಕ ತಾನೇ ಮಾಡುವುದಾಗಿ ಹೇಳುತ್ತಾನೆ. ಅಂತಹ ಗಳಿಗೆಗಳಲ್ಲಿ ದುಃಖ ಉಮ್ಮಳಿಸಿ ಬರುತ್ತದೆ. ಇದನ್ನು ಯಾರಲ್ಲೂ ಹೇಳಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಅಳುವವರ ಮುಂದೆ ಅಳುತ್ತೇವೆ, ನಗುವವರ ಮುಂದೆ ನಗುತ್ತೇವೆ. ಇಷ್ಟೇಲ್ಲಾ ನೋವುಗಳ ನಡುವೆಯೂ ಮಗ ದೇಶ ಕಾಯಲು ಹೋಗಿದ್ದಾನೆ ಎಂಬ ಹೆಮ್ಮೆನಮ್ಮದು’ ಎಂದು ತಮ್ಮನ್ನು ತಾವೇ ಸಮಾಧಾನಗೊಳಿಸಿಕೊಳ್ಳುತ್ತಾರೆ ತಾಯಿ ರಮಲಾಬಾಯಿ ವಿಠೋಬಾ ಜಾಧವ.