ಚಿಕ್ಕಬಳ್ಳಾಪುರ: ‘ಬೆಂಗಳೂರಿನ ಗಾರ್ಮೆಂಟ್ಗಳಲ್ಲಿ ಕೆಲಸಕ್ಕೆ ಸೇರಬೇಕಾದರೆ ಯುವತಿಯರು ಸುಂದರವಾಗಿರಬೇಕು. ತೆಳ್ಳಗೆ ಬೆಳ್ಳಗೆ ಇರಬೇಕು’ ಹೀಗೆ ಹೇಳಿದ್ದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿ, ‘ಜಿಲ್ಲೆಯಲ್ಲಿ 9 ಗಾರ್ಮೆಂಟ್ಗಳಿದ್ದು 2013ರ ನಂತರ ಯಾವುದೇ ಗಾರ್ಮೆಂಟ್ನಲ್ಲಿಯೂ ಮಹಿಳೆಯ ಮೇಲೆ ದೌರ್ಜನ್ಯ ನಡೆದಿಲ್ಲ’ ಎಂದರು.
ತಕ್ಷಣ ಪ್ರತಿಕ್ರಿಯಿಸಿದ ನಾಗಲಕ್ಷ್ಮಿಬಾಯಿ, ‘ಗಾರ್ಮೆಂಟ್ಗಳಲ್ಲಿ ಯುವತಿಯರಿಗೆ ಮೊದಲ ಆದ್ಯತೆ. ಅಲ್ಲದೆ ಅವರು ಸುಂದರವಾಗಿರಬೇಕು’ ಎಂದರು.