‘ಕಲಾವಿದರ ದತ್ತಾಂಶ ಬ್ಯಾಂಕ್ ಬಗ್ಗೆ ಯೋಜನೆ ರೂಪಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಮುಂದಾಗಿರುವುದು ಸ್ವಾಗತಾರ್ಹ. ಆದರೆ, 90ರ ದಶಕದಲ್ಲಿ ಇಲಾಖೆಯ ನಿರ್ದೇಶಕನಾಗಿದ್ದಾಗ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿನ ಸಾಹಿತಿಗಳ ಹಾಗೂ ವಿವಿಧ ಕಲಾ
ಪ್ರಕಾರಗಳ ಕಲಾವಿದರ ಮಾಹಿತಿಗಳನ್ನು ಸಂಗ್ರಹಿಸಿ, ಇಲಾಖೆಯಲ್ಲಿ ದಾಖಲು ಮಾಡಿಸಿದ್ದೆ.ಕನ್ನಡಭವನ ನಿರ್ಮಾಣದ ನಂತರ ಅಲ್ಲಿಗೆ ಬರುವ ಕಲಾಸಕ್ತರ ಅನುಕೂಲಕ್ಕಾಗಿ ದೃಶ್ಯ ವಿಭಾಗ ತೆರೆದು, ಪರದೆ ಮತ್ತು ಪ್ರೊಜೆಕ್ಟರ್ ಮೂಲಕ ಸಂಸ್ಕೃತಿಗೆ ಸಂಬಂಧಿಸಿದ ಪ್ರಮುಖ ಕಾರ್ಯಕ್ರಮಗಳು ಮತ್ತು ಉತ್ಸವಗಳ ಚಿತ್ರಗಳನ್ನು ಹಾಗೂ ಕಿರು ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಆ ವಿಭಾಗವನ್ನುಮುಚ್ಚಲಾಗಿದೆ’ ಎಂದು ಹೇಳಿದ್ದಾರೆ.