<p><strong>ಬೆಂಗಳೂರು</strong>: `ಪ್ರತಿಭಟನೆ ನಡೆಸುವ ರೀತಿಯೇ ಇದು, ನೀವೂ ವಕೀಲರಾ? ನಿಮಗೇನಾದರೂ ವಿವೇಚನೆ ಇದೆಯಾ, ಹೈಕೋರ್ಟ್ಗೆ ನುಗ್ಗಿ ಕಲಾಪ ನಿಲ್ಲಿಸುವಂತೆ ಗಲಾಟೆ ಮಾಡಿದರೆ ಎಲ್ಲರನ್ನೂ ಜೈಲಿಗೆ ಕಳುಹಿಸಬೇಕಾಗುತ್ತದೆ...~<br /> <br /> -ಹೈಕೋರ್ಟ್ ಕಲಾಪ ಬಹಿಷ್ಕಾರಕ್ಕಾಗಿ ನ್ಯಾಯಾಲಯಕ್ಕೆ `ನುಗ್ಗಿದ~ ಕೆಲ ವಕೀಲರ ಗುಂಪಿನ ವಿರುದ್ಧ `ಗರಂ~ ಆದ ನ್ಯಾಯಮೂರ್ತಿ ದಿಲೀಪ್ ಬಿ. ಬೋಸ್ಲೆ ಅವರು ಆ ವಕೀಲರನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.<br /> <br /> ಸಿವಿಲ್ ಕೋರ್ಟ್ನಲ್ಲಿ ಗಲಾಟೆ ನಡೆಯುತ್ತಿದ್ದಂತೆ ಮಧ್ಯಾಹ್ನ 2.30ರ ವೇಳೆ 30-40 ಮಂದಿ ವಕೀಲರು ಹೈಕೋರ್ಟ್ಗೆ ಧಾವಿಸಿ ಕಲಾಪ ಬಹಿಷ್ಕಾರಕ್ಕೆ ಮುಂದಾದರು. ಮೊದಲು ಅವರು ನ್ಯಾ.ದಿಲೀಪ್ ಅವರ ನೇತೃತ್ವದ ವಿಭಾಗೀಯ ಪೀಠ ಕಲಾಪ ನಡೆಸುತ್ತಿದ್ದ ಸಭಾಂಗಣದ ಒಳಕ್ಕೆ ಹೋಗಿ ಗಲಾಟೆ ಮಾಡಿದರು. ಗಲಾಟೆ ಕಂಡು ನ್ಯಾ.ದಿಲೀಪ್ ಅವರ ಕೋಪ ಉಕ್ಕಿತು.<br /> <br /> ಆ ಗುಂಪಿನಲ್ಲಿ ಕೆಲವರು ವಕೀಲರ ಸಮವಸ್ತ್ರ ಧರಿಸಿ ಬಂದಿರಲಿಲ್ಲ. ಅದಕ್ಕೆ ನ್ಯಾ. ದಿಲೀಪ್ ಅವರು, `ಕೋರ್ಟ್ ಪ್ರವೇಶ ಮಾಡುವಾಗ ಸಮವಸ್ತ್ರ ಧರಿಸಿ ಬರಬೇಕು ಎನ್ನುವ ಪ್ರಜ್ಞೆ ಇಲ್ಲವೆ, ಪ್ರತಿಭಟನೆ ಮಾಡುವ ರೀತಿಯೇ ಇದು, ನಾನು ಕೂಡ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಆಗ ಕೂಡ ಪ್ರತಿಭಟನೆ ನಡೆದಿರುವ ಉದಾಹರಣೆಗಳು ಇವೆ. ಆದರೆ ಈ ಪರಿ ವಕೀಲರು ಎಂದೂ ಪ್ರತಿಭಟನೆ ನಡೆಸಿರಲಿಲ್ಲ. ಗಲಾಟೆ ಮಾಡುವ ಬದಲು ಕಲಾಪ ನಡೆಸದಂತೆ ಮನವಿ ಮಾಡಿಕೊಳ್ಳಬಹುದಲ್ಲ~ ಎಂದರು.<br /> <br /> ಅಲ್ಲಿ ಹಾಜರು ಇದ್ದ ಹಿರಿಯ ವಕೀಲ ಎಸ್.ಎಸ್.ನಾಗಾನಂದ ಅವರನ್ನು ಉದ್ದೇಶಿಸಿದ ನ್ಯಾಯಮೂರ್ತಿಗಳು, `ಇಲ್ಲಿ ಯಾರ್ಯಾರು ವಕೀಲರು ಇದ್ದಾರೆ ಎಂದು ಹೆಸರು ಹೇಳಿ. ಎಲ್ಲರನ್ನೂ ಜೈಲಿಗೆ ಕಳುಹಿಸುವೆ~ ಎಂದರು. ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿಕೊಳ್ಳುವಂತೆ ಉದ್ರಿಕ್ತ ವಕೀಲರಿಗೆ ಸಲಹೆ ಮಾಡುವ ಮೂಲಕ ನಾಗಾನಂದ ಅವರು ಪರಿಸ್ಥಿತಿ ಶಾಂತಗೊಳಿಸಿದರು.<br /> <br /> ನಂತರ ಉಳಿದ ಸಭಾಂಗಣಗಳಿಗೆ ಶಾಂತಚಿತ್ತರಾಗಿ ಹೋದ ವಕೀಲರು ನ್ಯಾಯಮೂರ್ತಿಗಳಿಗೆ ಮನವಿ ಮಾಡಿಕೊಳ್ಳುವ ಮೂಲಕ ಕಲಾಪ ಮುಕ್ತಾಯಗೊಳಿಸುವಂತೆ ಕೋರಿದರು.<br /> <br /> `ಇಬ್ಬರು ವಕೀಲರು ಈ ಘಟನೆಯಲ್ಲಿ ಸತ್ತುಹೋಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಬೇಕಿರುವ ಹಿನ್ನೆಲೆಯಲ್ಲಿ ಕಲಾಪ ಮುಕ್ತಾಯಗೊಳಿಸಬೇಕು~ ಎಂದು ವಕೀಲರು ಕೋರಿದರು. ಆದರೆ ವಾಸ್ತವದಲ್ಲಿ ಯಾವೊಬ್ಬ ವಕೀಲರ ಸಾವು ಸಂಭವಿಸಿರಲಿಲ್ಲ!<br /> <br /> <strong>ಸಿಜೆ ಕೊಠಡಿ ಎದುರೇ ಕಚ್ಚಾಟ:</strong> ಈ ಮಧ್ಯೆ ಗೃಹ ಸಚಿವ ಆರ್.ಅಶೋಕ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರನ್ನು ಭೇಟಿಯಾಗಲು ಬಂದಿದ್ದರು. <br /> <br /> ಆಗ ಅಲ್ಲಿಗೆ ಧಾವಿಸಿದ ವಕೀಲರ ಗುಂಪೊಂದು, ಅದು ಮುಖ್ಯ ನ್ಯಾಯಮೂರ್ತಿಗಳ ಕೊಠಡಿ ಎನ್ನುವುದನ್ನೂ ಮರೆತು ಅಶೋಕ ಅವರ ಜೊತೆ ಗಲಾಟೆಗೆ ಇಳಿಯಿತು. ಇವರ ಗಲಾಟೆ ನೋಡಿ ಪೊಲೀಸರ ದಂಡು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿತು.<br /> <br /> <strong>ಕೋರ್ಟ್ ಚಾಲಕನ ದರೋಡೆ!</strong><br /> ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ ಅವರು ಘಟನಾ ಸ್ಥಳಕ್ಕೆ (ಸಿವಿಲ್ ಕೋರ್ಟ್) ಭೇಟಿ ನೀಡಲು ಹೋಗಿದ್ದಾಗ, ಅವರ ಕಾರು ಚಾಲಕನ ಮೇಲೆ ವಕೀಲರಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.<br /> <br /> `ಚಾಲಕ ಜಗದೀಶ್ ಅವರು ಕಾರು ಪಾರ್ಕಿಂಗ್ ಮಾಡಲು ಹೋದ ಸಂದರ್ಭದಲ್ಲಿ ಕಪ್ಪು ಕೋಟು ಧರಿಸಿದವರು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಜಗದೀಶ್ ಅವರ ಬಳಿ ಇದ್ದ ಮೊಬೈಲ್ ಫೋನ್, ವಾಚ್ ಹಾಗೂ ಚಿನ್ನದ ಸರವನ್ನು ಕಿತ್ತುಕೊಳ್ಳಲಾಗಿದೆ~ ಎಂದು ಮೂಲಗಳು ತಿಳಿಸಿವೆ.</p>.<p><strong>ಇಂದು ಕಲಾಪ ಇಲ್ಲ<br /> ಬೆಂಗಳೂರು: </strong> ಸಿವಿಲ್ ಕೋರ್ಟ್ನಲ್ಲಿ ಶುಕ್ರವಾರ ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ಬೆಂಗಳೂ ರಿನ ಯಾವುದೇ ನ್ಯಾಯಾಲಯಗಳಲ್ಲಿ ಶನಿವಾರ ನ್ಯಾಯಾಂಗ ಕಲಾಪ ನಡೆಯುವುದಿಲ್ಲ.<br /> <br /> ಮ್ಯಾಜಿಸ್ಟ್ರೇಟ್ ಕೋರ್ಟ್, ಸಿವಿಲ್ ಕೋರ್ಟ್, ಕೌಟುಂಬಿಕ ಕೋರ್ಟ್, ಲೋಕಾಯುಕ್ತ ಕೋರ್ಟ್, ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರು ಗ್ರಾಮಾಂತರ ಕೋರ್ಟ್ ಸೇರಿಯಾವುದೇ ನ್ಯಾಯಾಲಯಗಳಲ್ಲಿಯೂ ಕಲಾಪ ನಡೆಯುವುದಿಲ್ಲ ಎಂದು ಹೈಕೋರ್ಟ್ ಪ್ರಕಟಣೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: `ಪ್ರತಿಭಟನೆ ನಡೆಸುವ ರೀತಿಯೇ ಇದು, ನೀವೂ ವಕೀಲರಾ? ನಿಮಗೇನಾದರೂ ವಿವೇಚನೆ ಇದೆಯಾ, ಹೈಕೋರ್ಟ್ಗೆ ನುಗ್ಗಿ ಕಲಾಪ ನಿಲ್ಲಿಸುವಂತೆ ಗಲಾಟೆ ಮಾಡಿದರೆ ಎಲ್ಲರನ್ನೂ ಜೈಲಿಗೆ ಕಳುಹಿಸಬೇಕಾಗುತ್ತದೆ...~<br /> <br /> -ಹೈಕೋರ್ಟ್ ಕಲಾಪ ಬಹಿಷ್ಕಾರಕ್ಕಾಗಿ ನ್ಯಾಯಾಲಯಕ್ಕೆ `ನುಗ್ಗಿದ~ ಕೆಲ ವಕೀಲರ ಗುಂಪಿನ ವಿರುದ್ಧ `ಗರಂ~ ಆದ ನ್ಯಾಯಮೂರ್ತಿ ದಿಲೀಪ್ ಬಿ. ಬೋಸ್ಲೆ ಅವರು ಆ ವಕೀಲರನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.<br /> <br /> ಸಿವಿಲ್ ಕೋರ್ಟ್ನಲ್ಲಿ ಗಲಾಟೆ ನಡೆಯುತ್ತಿದ್ದಂತೆ ಮಧ್ಯಾಹ್ನ 2.30ರ ವೇಳೆ 30-40 ಮಂದಿ ವಕೀಲರು ಹೈಕೋರ್ಟ್ಗೆ ಧಾವಿಸಿ ಕಲಾಪ ಬಹಿಷ್ಕಾರಕ್ಕೆ ಮುಂದಾದರು. ಮೊದಲು ಅವರು ನ್ಯಾ.ದಿಲೀಪ್ ಅವರ ನೇತೃತ್ವದ ವಿಭಾಗೀಯ ಪೀಠ ಕಲಾಪ ನಡೆಸುತ್ತಿದ್ದ ಸಭಾಂಗಣದ ಒಳಕ್ಕೆ ಹೋಗಿ ಗಲಾಟೆ ಮಾಡಿದರು. ಗಲಾಟೆ ಕಂಡು ನ್ಯಾ.ದಿಲೀಪ್ ಅವರ ಕೋಪ ಉಕ್ಕಿತು.<br /> <br /> ಆ ಗುಂಪಿನಲ್ಲಿ ಕೆಲವರು ವಕೀಲರ ಸಮವಸ್ತ್ರ ಧರಿಸಿ ಬಂದಿರಲಿಲ್ಲ. ಅದಕ್ಕೆ ನ್ಯಾ. ದಿಲೀಪ್ ಅವರು, `ಕೋರ್ಟ್ ಪ್ರವೇಶ ಮಾಡುವಾಗ ಸಮವಸ್ತ್ರ ಧರಿಸಿ ಬರಬೇಕು ಎನ್ನುವ ಪ್ರಜ್ಞೆ ಇಲ್ಲವೆ, ಪ್ರತಿಭಟನೆ ಮಾಡುವ ರೀತಿಯೇ ಇದು, ನಾನು ಕೂಡ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಆಗ ಕೂಡ ಪ್ರತಿಭಟನೆ ನಡೆದಿರುವ ಉದಾಹರಣೆಗಳು ಇವೆ. ಆದರೆ ಈ ಪರಿ ವಕೀಲರು ಎಂದೂ ಪ್ರತಿಭಟನೆ ನಡೆಸಿರಲಿಲ್ಲ. ಗಲಾಟೆ ಮಾಡುವ ಬದಲು ಕಲಾಪ ನಡೆಸದಂತೆ ಮನವಿ ಮಾಡಿಕೊಳ್ಳಬಹುದಲ್ಲ~ ಎಂದರು.<br /> <br /> ಅಲ್ಲಿ ಹಾಜರು ಇದ್ದ ಹಿರಿಯ ವಕೀಲ ಎಸ್.ಎಸ್.ನಾಗಾನಂದ ಅವರನ್ನು ಉದ್ದೇಶಿಸಿದ ನ್ಯಾಯಮೂರ್ತಿಗಳು, `ಇಲ್ಲಿ ಯಾರ್ಯಾರು ವಕೀಲರು ಇದ್ದಾರೆ ಎಂದು ಹೆಸರು ಹೇಳಿ. ಎಲ್ಲರನ್ನೂ ಜೈಲಿಗೆ ಕಳುಹಿಸುವೆ~ ಎಂದರು. ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿಕೊಳ್ಳುವಂತೆ ಉದ್ರಿಕ್ತ ವಕೀಲರಿಗೆ ಸಲಹೆ ಮಾಡುವ ಮೂಲಕ ನಾಗಾನಂದ ಅವರು ಪರಿಸ್ಥಿತಿ ಶಾಂತಗೊಳಿಸಿದರು.<br /> <br /> ನಂತರ ಉಳಿದ ಸಭಾಂಗಣಗಳಿಗೆ ಶಾಂತಚಿತ್ತರಾಗಿ ಹೋದ ವಕೀಲರು ನ್ಯಾಯಮೂರ್ತಿಗಳಿಗೆ ಮನವಿ ಮಾಡಿಕೊಳ್ಳುವ ಮೂಲಕ ಕಲಾಪ ಮುಕ್ತಾಯಗೊಳಿಸುವಂತೆ ಕೋರಿದರು.<br /> <br /> `ಇಬ್ಬರು ವಕೀಲರು ಈ ಘಟನೆಯಲ್ಲಿ ಸತ್ತುಹೋಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಬೇಕಿರುವ ಹಿನ್ನೆಲೆಯಲ್ಲಿ ಕಲಾಪ ಮುಕ್ತಾಯಗೊಳಿಸಬೇಕು~ ಎಂದು ವಕೀಲರು ಕೋರಿದರು. ಆದರೆ ವಾಸ್ತವದಲ್ಲಿ ಯಾವೊಬ್ಬ ವಕೀಲರ ಸಾವು ಸಂಭವಿಸಿರಲಿಲ್ಲ!<br /> <br /> <strong>ಸಿಜೆ ಕೊಠಡಿ ಎದುರೇ ಕಚ್ಚಾಟ:</strong> ಈ ಮಧ್ಯೆ ಗೃಹ ಸಚಿವ ಆರ್.ಅಶೋಕ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರನ್ನು ಭೇಟಿಯಾಗಲು ಬಂದಿದ್ದರು. <br /> <br /> ಆಗ ಅಲ್ಲಿಗೆ ಧಾವಿಸಿದ ವಕೀಲರ ಗುಂಪೊಂದು, ಅದು ಮುಖ್ಯ ನ್ಯಾಯಮೂರ್ತಿಗಳ ಕೊಠಡಿ ಎನ್ನುವುದನ್ನೂ ಮರೆತು ಅಶೋಕ ಅವರ ಜೊತೆ ಗಲಾಟೆಗೆ ಇಳಿಯಿತು. ಇವರ ಗಲಾಟೆ ನೋಡಿ ಪೊಲೀಸರ ದಂಡು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿತು.<br /> <br /> <strong>ಕೋರ್ಟ್ ಚಾಲಕನ ದರೋಡೆ!</strong><br /> ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ ಅವರು ಘಟನಾ ಸ್ಥಳಕ್ಕೆ (ಸಿವಿಲ್ ಕೋರ್ಟ್) ಭೇಟಿ ನೀಡಲು ಹೋಗಿದ್ದಾಗ, ಅವರ ಕಾರು ಚಾಲಕನ ಮೇಲೆ ವಕೀಲರಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.<br /> <br /> `ಚಾಲಕ ಜಗದೀಶ್ ಅವರು ಕಾರು ಪಾರ್ಕಿಂಗ್ ಮಾಡಲು ಹೋದ ಸಂದರ್ಭದಲ್ಲಿ ಕಪ್ಪು ಕೋಟು ಧರಿಸಿದವರು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಜಗದೀಶ್ ಅವರ ಬಳಿ ಇದ್ದ ಮೊಬೈಲ್ ಫೋನ್, ವಾಚ್ ಹಾಗೂ ಚಿನ್ನದ ಸರವನ್ನು ಕಿತ್ತುಕೊಳ್ಳಲಾಗಿದೆ~ ಎಂದು ಮೂಲಗಳು ತಿಳಿಸಿವೆ.</p>.<p><strong>ಇಂದು ಕಲಾಪ ಇಲ್ಲ<br /> ಬೆಂಗಳೂರು: </strong> ಸಿವಿಲ್ ಕೋರ್ಟ್ನಲ್ಲಿ ಶುಕ್ರವಾರ ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ಬೆಂಗಳೂ ರಿನ ಯಾವುದೇ ನ್ಯಾಯಾಲಯಗಳಲ್ಲಿ ಶನಿವಾರ ನ್ಯಾಯಾಂಗ ಕಲಾಪ ನಡೆಯುವುದಿಲ್ಲ.<br /> <br /> ಮ್ಯಾಜಿಸ್ಟ್ರೇಟ್ ಕೋರ್ಟ್, ಸಿವಿಲ್ ಕೋರ್ಟ್, ಕೌಟುಂಬಿಕ ಕೋರ್ಟ್, ಲೋಕಾಯುಕ್ತ ಕೋರ್ಟ್, ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರು ಗ್ರಾಮಾಂತರ ಕೋರ್ಟ್ ಸೇರಿಯಾವುದೇ ನ್ಯಾಯಾಲಯಗಳಲ್ಲಿಯೂ ಕಲಾಪ ನಡೆಯುವುದಿಲ್ಲ ಎಂದು ಹೈಕೋರ್ಟ್ ಪ್ರಕಟಣೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>