<p><strong>ಹೊಸಪೇಟೆ</strong>: ಸರಿಯಾಗಿ ಮೌಲ್ಯಮಾಪನ ಮಾಡದೇ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿಯರು ಬುಧವಾರ ಕಾಲೇಜಿನ ಆವರಣದಲ್ಲಿ ಧರಣಿ ನಡೆಸಿದರು.</p>.<p>ಪ್ರಸಕ್ತ ಸಾಲಿನ ಪ್ರಥಮ ಪಿಯು ಪರೀಕ್ಷೆಗೆ ಹಾಜರಾಗಿದ್ದ 794 ವಿದ್ಯಾರ್ಥಿನಿಯರ ಪೈಕಿ 533 ಮಂದಿ ಉತ್ತೀರ್ಣರಾದರೆ, 261 ವಿದ್ಯಾರ್ಥಿನಿಯರು ಅನುತ್ತೀರ್ಣರಾಗಿದ್ದಾರೆ. ಕೆಲವರು ಎರಡ್ಮೂರು ವಿಷಯಗಳಲ್ಲಿ, ಇನ್ನು ಕೆಲವರು ಎಲ್ಲ ವಿಷಯಗಳಲ್ಲಿ ಅನುತ್ತೀರ್ಣ<br /> ರಾಗಿದ್ದಾರೆ.</p>.<p>ವಿದ್ಯಾರ್ಥಿನಿಯರೊಂದಿಗೆ ಅವರ ಪೋಷಕರೂ ಧರಣಿ ನಡೆಸಿದರು. ಕಾಲೇಜಿನ ಪ್ರಾಚಾರ್ಯರು ಹಾಗೂ ಶಿಕ್ಷಕರ ವಿರುದ್ಧ ಆಕ್ರೋಶ ಹೊರ ಹಾಕಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಇನ್ಸ್ಪೆಕ್ಟರ್ ಇ.ಒ. ಮಂಜುನಾಥ್ ಎಲ್ಲರನ್ನೂ ಸಮಾಧಾನ ಮಾಡಿ ವಾತಾವರಣ ತಿಳಿಗೊಳಿಸಿದರು.</p>.<p>‘ಯಾವ ವಿಷಯಗಳಲ್ಲಿ ಉತ್ತೀರ್ಣರಾಗಬಹುದಿತ್ತು ಎಂದು ನಿಮಗೆ ಅನಿಸಿದೆಯೋ ಆ ವಿಷಯದ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿರಿ. ನಂತರ ಸತ್ಯಾಂಶ ಏನೆಂಬುದು ಗೊತ್ತಾಗಲಿದೆ. ಯಾರಾದರೂ ಬೇಜವಾಬ್ದಾರಿಯಿಂದ ಮೌಲ್ಯಮಾಪನ ಮಾಡಿರುವುದು ಸಾಬೀತಾದರೆ ಅಂಥವರ ವಿರುದ್ಧ ಪಿ.ಯು. ಮಂಡಳಿ ಕ್ರಮ ಜರುಗಿಸುತ್ತದೆ’ ಎಂದು ಮಂಜುನಾಥ್ ಹೇಳಿದ ನಂತರ ವಿದ್ಯಾರ್ಥಿನಿಯರು ಧರಣಿ ಕೈಬಿಟ್ಟರು.</p>.<p>‘ಸರಿಯಾಗಿ ಮೌಲ್ಯಮಾಪನ ಮಾಡದೆ ಫೇಲು ಮಾಡಿದ್ದಾರೆ. ಯಾವುದೇ ವಿಷಯಗಳಲ್ಲಿ ಮಕ್ಕಳು ಫೇಲಾದರೂ ಕನ್ನಡದಲ್ಲಿ ಆಗುವುದಿಲ್ಲ. 10ನೇ ತರಗತಿಯಲ್ಲಿ ಶೇ 95ರಷ್ಟು ಅಂಕ ಪಡೆದಿದ್ದ ನನ್ನ ಮಗಳು ಪ್ರಥಮ ಪಿಯುಸಿಯಲ್ಲಿ ಐದು ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದಾಳೆ. ಹೀಗಾಗಲು ಹೇಗೆ ಸಾಧ್ಯ’ ಎಂದು ಪೋಷಕರೊಬ್ಬರು ಪ್ರಶ್ನಿಸಿದರು.</p>.<p>‘ಇಂಗ್ಲಿಷ್, ಗಣಿತ ವಿಷಯ ಕಲಿಯುವ ಸ್ಥಿತಿಯಲ್ಲಿ ಮಕ್ಕಳಿಲ್ಲ. ವಿಶೇಷ ತರಗತಿಗಳನ್ನು ನಡೆಸಿದರೂ ಫಲ ಕೊಟ್ಟಿಲ್ಲ. ಬಹುತೇಕರು ತರಗತಿಗಳಿಗೆ ಸರಿಯಾಗಿ ಬರುವುದಿಲ್ಲ. ಶ್ರದ್ಧೆಯಿಂದ ಓದಿದವರು ಪಾಸಾಗಿದ್ದಾರೆ. ಮೌಲ್ಯಮಾಪನದ ಬಗ್ಗೆ ಅನುಮಾನ ಇರುವವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು’ ಎಂದು ಪ್ರಾಚಾರ್ಯ ಎ. ಪುರುಷೋತ್ತಮ್ ಪ್ರತಿಕ್ರಿಯಿಸಿದರು.</p>.<p>‘ಕಲಾ ವಿಭಾಗದಲ್ಲಿ 135, ವಾಣಿಜ್ಯ ವಿಭಾಗದಲ್ಲಿ 120 ಹಾಗೂ ವಿಜ್ಞಾನ ವಿಭಾಗದಲ್ಲಿ ಆರು ವಿದ್ಯಾರ್ಥಿನಿಯರು ಅನುತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಕಾಲೇಜಿನ ಫಲಿತಾಂಶ ಶೇ 71.30ರಷ್ಟು ಬಂದಿತ್ತು. ಈ ವರ್ಷ ಅದು ಶೇ 67.12ಕ್ಕೆ ಕುಸಿದಿದೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ</strong>: ಸರಿಯಾಗಿ ಮೌಲ್ಯಮಾಪನ ಮಾಡದೇ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿಯರು ಬುಧವಾರ ಕಾಲೇಜಿನ ಆವರಣದಲ್ಲಿ ಧರಣಿ ನಡೆಸಿದರು.</p>.<p>ಪ್ರಸಕ್ತ ಸಾಲಿನ ಪ್ರಥಮ ಪಿಯು ಪರೀಕ್ಷೆಗೆ ಹಾಜರಾಗಿದ್ದ 794 ವಿದ್ಯಾರ್ಥಿನಿಯರ ಪೈಕಿ 533 ಮಂದಿ ಉತ್ತೀರ್ಣರಾದರೆ, 261 ವಿದ್ಯಾರ್ಥಿನಿಯರು ಅನುತ್ತೀರ್ಣರಾಗಿದ್ದಾರೆ. ಕೆಲವರು ಎರಡ್ಮೂರು ವಿಷಯಗಳಲ್ಲಿ, ಇನ್ನು ಕೆಲವರು ಎಲ್ಲ ವಿಷಯಗಳಲ್ಲಿ ಅನುತ್ತೀರ್ಣ<br /> ರಾಗಿದ್ದಾರೆ.</p>.<p>ವಿದ್ಯಾರ್ಥಿನಿಯರೊಂದಿಗೆ ಅವರ ಪೋಷಕರೂ ಧರಣಿ ನಡೆಸಿದರು. ಕಾಲೇಜಿನ ಪ್ರಾಚಾರ್ಯರು ಹಾಗೂ ಶಿಕ್ಷಕರ ವಿರುದ್ಧ ಆಕ್ರೋಶ ಹೊರ ಹಾಕಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಇನ್ಸ್ಪೆಕ್ಟರ್ ಇ.ಒ. ಮಂಜುನಾಥ್ ಎಲ್ಲರನ್ನೂ ಸಮಾಧಾನ ಮಾಡಿ ವಾತಾವರಣ ತಿಳಿಗೊಳಿಸಿದರು.</p>.<p>‘ಯಾವ ವಿಷಯಗಳಲ್ಲಿ ಉತ್ತೀರ್ಣರಾಗಬಹುದಿತ್ತು ಎಂದು ನಿಮಗೆ ಅನಿಸಿದೆಯೋ ಆ ವಿಷಯದ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿರಿ. ನಂತರ ಸತ್ಯಾಂಶ ಏನೆಂಬುದು ಗೊತ್ತಾಗಲಿದೆ. ಯಾರಾದರೂ ಬೇಜವಾಬ್ದಾರಿಯಿಂದ ಮೌಲ್ಯಮಾಪನ ಮಾಡಿರುವುದು ಸಾಬೀತಾದರೆ ಅಂಥವರ ವಿರುದ್ಧ ಪಿ.ಯು. ಮಂಡಳಿ ಕ್ರಮ ಜರುಗಿಸುತ್ತದೆ’ ಎಂದು ಮಂಜುನಾಥ್ ಹೇಳಿದ ನಂತರ ವಿದ್ಯಾರ್ಥಿನಿಯರು ಧರಣಿ ಕೈಬಿಟ್ಟರು.</p>.<p>‘ಸರಿಯಾಗಿ ಮೌಲ್ಯಮಾಪನ ಮಾಡದೆ ಫೇಲು ಮಾಡಿದ್ದಾರೆ. ಯಾವುದೇ ವಿಷಯಗಳಲ್ಲಿ ಮಕ್ಕಳು ಫೇಲಾದರೂ ಕನ್ನಡದಲ್ಲಿ ಆಗುವುದಿಲ್ಲ. 10ನೇ ತರಗತಿಯಲ್ಲಿ ಶೇ 95ರಷ್ಟು ಅಂಕ ಪಡೆದಿದ್ದ ನನ್ನ ಮಗಳು ಪ್ರಥಮ ಪಿಯುಸಿಯಲ್ಲಿ ಐದು ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದಾಳೆ. ಹೀಗಾಗಲು ಹೇಗೆ ಸಾಧ್ಯ’ ಎಂದು ಪೋಷಕರೊಬ್ಬರು ಪ್ರಶ್ನಿಸಿದರು.</p>.<p>‘ಇಂಗ್ಲಿಷ್, ಗಣಿತ ವಿಷಯ ಕಲಿಯುವ ಸ್ಥಿತಿಯಲ್ಲಿ ಮಕ್ಕಳಿಲ್ಲ. ವಿಶೇಷ ತರಗತಿಗಳನ್ನು ನಡೆಸಿದರೂ ಫಲ ಕೊಟ್ಟಿಲ್ಲ. ಬಹುತೇಕರು ತರಗತಿಗಳಿಗೆ ಸರಿಯಾಗಿ ಬರುವುದಿಲ್ಲ. ಶ್ರದ್ಧೆಯಿಂದ ಓದಿದವರು ಪಾಸಾಗಿದ್ದಾರೆ. ಮೌಲ್ಯಮಾಪನದ ಬಗ್ಗೆ ಅನುಮಾನ ಇರುವವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು’ ಎಂದು ಪ್ರಾಚಾರ್ಯ ಎ. ಪುರುಷೋತ್ತಮ್ ಪ್ರತಿಕ್ರಿಯಿಸಿದರು.</p>.<p>‘ಕಲಾ ವಿಭಾಗದಲ್ಲಿ 135, ವಾಣಿಜ್ಯ ವಿಭಾಗದಲ್ಲಿ 120 ಹಾಗೂ ವಿಜ್ಞಾನ ವಿಭಾಗದಲ್ಲಿ ಆರು ವಿದ್ಯಾರ್ಥಿನಿಯರು ಅನುತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಕಾಲೇಜಿನ ಫಲಿತಾಂಶ ಶೇ 71.30ರಷ್ಟು ಬಂದಿತ್ತು. ಈ ವರ್ಷ ಅದು ಶೇ 67.12ಕ್ಕೆ ಕುಸಿದಿದೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>