<p><strong>ಕೋಲಾರ: </strong> ಜಿಲ್ಲೆಯಲ್ಲಿ ಜುಲೈ- ಆಗಸ್ಟ್ನಲ್ಲಿ ಬಿತ್ತನೆ ಮಾಡಿದ್ದ ರಾಗಿ ಈಗ ತೆನೆಗಟ್ಟುತ್ತಿದ್ದರೂ ಅದಕ್ಕೆ ಬೇಕಾದ ಮಳೆ ಮಾತ್ರ ಕಾಣದಾಗಿದೆ. ತೆನೆಗಟ್ಟುತ್ತಿರುವ ರಾಗಿ ಕಣ್ಣಮುಂದೆಯೇ ಒಣಗುತ್ತಿದೆ. ಮಳೆ ಇಲ್ಲವೆಂದು ಹಾಗೇ ಒಣಗಲು ಬಿಟ್ಟರೆ ರಾಗಿಯೂ ಸಿಗುವುದಿಲ್ಲ, ರಾಸುಗಳಿಗೆ ಮೇವೂ ಇಲ್ಲದ ಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ.<br /> <br /> ತಾಲ್ಲೂಕಿನ ಕಾಮಧೇನುಹಳ್ಳಿಯ ರೈತ ಜಿ.ಪ್ರಕಾಶ್ ಅವರೂ ಈ ಸ್ಥಿತಿಗೆ ಹೊರತಾಗೇನೂ ಇಲ್ಲ. ತಮ್ಮ ಒಂದು ಎಕರೆ ಭೂಮಿಯಲ್ಲಿ ಆಗಸ್ಟ್ನಲ್ಲಿ `ಇಂಡಾಫ್- 5~ ತಳಿ ರಾಗಿ ಬಿತ್ತನೆ ಮಾಡಿದ್ದರು. ಈಗ ಅವರ ಜಮೀನಿನಲ್ಲಿ ಅರಳಿ ನಿಂತಿರುವ ರಾಗಿ ತೆನೆಗಳಲ್ಲಿ ಹಾಲು ಇಳಿಯುವ ಕಾಲ. <br /> <br /> ನೆಲದ ಮಣ್ಣಿನ ತೇವ ಆರಿ ಹತ್ತಾರು ದಿನಗಳಾಗಿವೆ. ಕಾದು ಕುಳಿತು ಸಾಕಾದ ಅವರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಭಾನುವಾರ ಮಧ್ಯಾಹ್ನ ಅವರ ಜಮೀನಿಗೆ `ಪ್ರಜಾವಾಣಿ~ ಪ್ರತಿನಿಧಿ ಭೇಟಿ ನೀಡಿದಾಗ ಅವರು 6ನೇ ಟ್ಯಾಂಕರ್ ನೀರನ್ನು ಹರಿಸುತ್ತಿದ್ದರು. ಸಂಜೆ ಹೊತ್ತಿಗೆ ಇನ್ನೂ ಮೂರು ಟ್ಯಾಂಕರ್ ನೀರು ಹರಿಸುವ ಯೋಜನೆಯೂ ಅವರಲ್ಲಿತ್ತು. <br /> <br /> ನೀರು ಹರಿಸುತ್ತಲೇ ಅವರು ತಮ್ಮ ಸಂಕಟ ತೋಡಿಕೊಂಡರು. `ನೀಲಂ ಚಂಡಮಾರುತದಿಂದ ಮಳೆ ಸುರಿದ ಪರಿಣಾಮ ಭೂಮಿಯಲ್ಲಿ ತೇವವಿತ್ತು. ತೇವ ಹೆಚ್ಚು ದಿನ ಇರಲಿಲ್ಲ. ತೇವವಾರಿದರೆ ತೆನೆಗಟ್ಟುತ್ತಿರುವ ರಾಗಿ ಒಣಗುತ್ತದೆ. ಆ ಮೇಲೆ ಕೈಗೆ ಏನೂ ಸಿಗುವುದಿಲ್ಲ. 15 ದಿನ ಕಾದರೂ ಮಳೆ ಬರಲಿಲ್ಲ. ಆದಕ್ಕೇ ಟ್ಯಾಂಕರ್ ನೀರನ್ನು ಹರಿಸಲು ನಿರ್ಧರಿಸಿದೆ~ ಎಂದರು.<br /> <br /> ಒಂದು ಟ್ಯಾಂಕರ್ ನೀರಿಗೆ ರೂ 350 ಕೊಡುತ್ತಿದ್ದಾರೆ. ಒಂದು ದಿನಕ್ಕೆ ಹತ್ತು ಟ್ಯಾಂಕರ್ ನೀರು ಪಡೆದರೆ ಮೂರುವರೆ ಸಾವಿರ ರೂಪಾಯಿ ಕೊಡಲೇಬೇಕು. ಮುಂದಿನ ವಾರದ ಹೊತ್ತಿಗೆ ಮಳೆ ಬಾರದಿದ್ದರೆ ಮತ್ತೆ ಅಷ್ಟೇ ಹಣವನ್ನು ಕೊಟ್ಟು ನೀರು ಹರಿಸಲೂ ಅವರು ನಿರ್ಧರಿಸಿದ್ದಾರೆ.<br /> <br /> `ದೀಪಾವಳಿವರೆಗೂ ಮಳೆಯ ಬಗ್ಗೆ ಆಸೆ ಇಟ್ಟುಕೊಂಡಿದ್ದೆ. ಅಲ್ಲಿಯವರೆಗೂ ಅಷ್ಟೋ ಇಷ್ಟೋ ತೇವವಿತ್ತು. ಆ ಮೇಲೆ ಅದೂ ಆರಿತು. ಹಾಲು ಇಳಿಯುವ ತೆನೆಗೆ ನೀರು ಕೊಡದಿದ್ದರೆ ನಷ್ಟ ಖಚಿತ. ಇತರೆ ರೈತರೂ ನೀರು ಹರಿಸದಿದ್ದರೆ ರಾಗಿ ಬೆಳೆ ದಕ್ಕುವುದಿಲ್ಲ~ ಎಂದು ಅವರು ನಿರಾಶೆಯ ನಿಟ್ಟುಸಿರು ಬಿಟ್ಟರು.<br /> <br /> ಕಾಮಧೇನುಹಳ್ಳಿಯ ಅವರ ಜಮೀನಿಗೆ ನೀರು ಹರಿಸಲು ಸುತ್ತಮುತ್ತ ಯಾವುದೇ ಖಾಸಗಿ ಕೊಳವೆಬಾವಿಗಳೂ ಇಲ್ಲದಿರುವುದರಿಂದ ಅವರು ಕೋಲಾರದಿಂದ ನೀರನ್ನು ತರಿಸುತ್ತಿದ್ದಾರೆ. <br /> `ಹಳ್ಳಿಯಲ್ಲಿ ಬೆಳೆಯುತ್ತಿರುವ ರಾಗಿಗೆ ನಗರದಿಂದ ಟ್ಯಾಂಕರ್ ನೀರು ಪೂರೈಸುತ್ತಿರುವದು, ಅನಿಶ್ಚಿತ ಮಳೆಯ ಕಣ್ಣಾಮುಚ್ಚಾಲೆಯಿಂದ ರೈತರು ಬಸವಳಿಯುತ್ತಿರುವುದಕ್ಕೆ ಸಾಕ್ಷಿಯಾಗಿದೆ~ ಎಂದು ಕೃಷಿ ತಜ್ಞ ನೀಲಕಂಠೇಗೌಡ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ: </strong> ಜಿಲ್ಲೆಯಲ್ಲಿ ಜುಲೈ- ಆಗಸ್ಟ್ನಲ್ಲಿ ಬಿತ್ತನೆ ಮಾಡಿದ್ದ ರಾಗಿ ಈಗ ತೆನೆಗಟ್ಟುತ್ತಿದ್ದರೂ ಅದಕ್ಕೆ ಬೇಕಾದ ಮಳೆ ಮಾತ್ರ ಕಾಣದಾಗಿದೆ. ತೆನೆಗಟ್ಟುತ್ತಿರುವ ರಾಗಿ ಕಣ್ಣಮುಂದೆಯೇ ಒಣಗುತ್ತಿದೆ. ಮಳೆ ಇಲ್ಲವೆಂದು ಹಾಗೇ ಒಣಗಲು ಬಿಟ್ಟರೆ ರಾಗಿಯೂ ಸಿಗುವುದಿಲ್ಲ, ರಾಸುಗಳಿಗೆ ಮೇವೂ ಇಲ್ಲದ ಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ.<br /> <br /> ತಾಲ್ಲೂಕಿನ ಕಾಮಧೇನುಹಳ್ಳಿಯ ರೈತ ಜಿ.ಪ್ರಕಾಶ್ ಅವರೂ ಈ ಸ್ಥಿತಿಗೆ ಹೊರತಾಗೇನೂ ಇಲ್ಲ. ತಮ್ಮ ಒಂದು ಎಕರೆ ಭೂಮಿಯಲ್ಲಿ ಆಗಸ್ಟ್ನಲ್ಲಿ `ಇಂಡಾಫ್- 5~ ತಳಿ ರಾಗಿ ಬಿತ್ತನೆ ಮಾಡಿದ್ದರು. ಈಗ ಅವರ ಜಮೀನಿನಲ್ಲಿ ಅರಳಿ ನಿಂತಿರುವ ರಾಗಿ ತೆನೆಗಳಲ್ಲಿ ಹಾಲು ಇಳಿಯುವ ಕಾಲ. <br /> <br /> ನೆಲದ ಮಣ್ಣಿನ ತೇವ ಆರಿ ಹತ್ತಾರು ದಿನಗಳಾಗಿವೆ. ಕಾದು ಕುಳಿತು ಸಾಕಾದ ಅವರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಭಾನುವಾರ ಮಧ್ಯಾಹ್ನ ಅವರ ಜಮೀನಿಗೆ `ಪ್ರಜಾವಾಣಿ~ ಪ್ರತಿನಿಧಿ ಭೇಟಿ ನೀಡಿದಾಗ ಅವರು 6ನೇ ಟ್ಯಾಂಕರ್ ನೀರನ್ನು ಹರಿಸುತ್ತಿದ್ದರು. ಸಂಜೆ ಹೊತ್ತಿಗೆ ಇನ್ನೂ ಮೂರು ಟ್ಯಾಂಕರ್ ನೀರು ಹರಿಸುವ ಯೋಜನೆಯೂ ಅವರಲ್ಲಿತ್ತು. <br /> <br /> ನೀರು ಹರಿಸುತ್ತಲೇ ಅವರು ತಮ್ಮ ಸಂಕಟ ತೋಡಿಕೊಂಡರು. `ನೀಲಂ ಚಂಡಮಾರುತದಿಂದ ಮಳೆ ಸುರಿದ ಪರಿಣಾಮ ಭೂಮಿಯಲ್ಲಿ ತೇವವಿತ್ತು. ತೇವ ಹೆಚ್ಚು ದಿನ ಇರಲಿಲ್ಲ. ತೇವವಾರಿದರೆ ತೆನೆಗಟ್ಟುತ್ತಿರುವ ರಾಗಿ ಒಣಗುತ್ತದೆ. ಆ ಮೇಲೆ ಕೈಗೆ ಏನೂ ಸಿಗುವುದಿಲ್ಲ. 15 ದಿನ ಕಾದರೂ ಮಳೆ ಬರಲಿಲ್ಲ. ಆದಕ್ಕೇ ಟ್ಯಾಂಕರ್ ನೀರನ್ನು ಹರಿಸಲು ನಿರ್ಧರಿಸಿದೆ~ ಎಂದರು.<br /> <br /> ಒಂದು ಟ್ಯಾಂಕರ್ ನೀರಿಗೆ ರೂ 350 ಕೊಡುತ್ತಿದ್ದಾರೆ. ಒಂದು ದಿನಕ್ಕೆ ಹತ್ತು ಟ್ಯಾಂಕರ್ ನೀರು ಪಡೆದರೆ ಮೂರುವರೆ ಸಾವಿರ ರೂಪಾಯಿ ಕೊಡಲೇಬೇಕು. ಮುಂದಿನ ವಾರದ ಹೊತ್ತಿಗೆ ಮಳೆ ಬಾರದಿದ್ದರೆ ಮತ್ತೆ ಅಷ್ಟೇ ಹಣವನ್ನು ಕೊಟ್ಟು ನೀರು ಹರಿಸಲೂ ಅವರು ನಿರ್ಧರಿಸಿದ್ದಾರೆ.<br /> <br /> `ದೀಪಾವಳಿವರೆಗೂ ಮಳೆಯ ಬಗ್ಗೆ ಆಸೆ ಇಟ್ಟುಕೊಂಡಿದ್ದೆ. ಅಲ್ಲಿಯವರೆಗೂ ಅಷ್ಟೋ ಇಷ್ಟೋ ತೇವವಿತ್ತು. ಆ ಮೇಲೆ ಅದೂ ಆರಿತು. ಹಾಲು ಇಳಿಯುವ ತೆನೆಗೆ ನೀರು ಕೊಡದಿದ್ದರೆ ನಷ್ಟ ಖಚಿತ. ಇತರೆ ರೈತರೂ ನೀರು ಹರಿಸದಿದ್ದರೆ ರಾಗಿ ಬೆಳೆ ದಕ್ಕುವುದಿಲ್ಲ~ ಎಂದು ಅವರು ನಿರಾಶೆಯ ನಿಟ್ಟುಸಿರು ಬಿಟ್ಟರು.<br /> <br /> ಕಾಮಧೇನುಹಳ್ಳಿಯ ಅವರ ಜಮೀನಿಗೆ ನೀರು ಹರಿಸಲು ಸುತ್ತಮುತ್ತ ಯಾವುದೇ ಖಾಸಗಿ ಕೊಳವೆಬಾವಿಗಳೂ ಇಲ್ಲದಿರುವುದರಿಂದ ಅವರು ಕೋಲಾರದಿಂದ ನೀರನ್ನು ತರಿಸುತ್ತಿದ್ದಾರೆ. <br /> `ಹಳ್ಳಿಯಲ್ಲಿ ಬೆಳೆಯುತ್ತಿರುವ ರಾಗಿಗೆ ನಗರದಿಂದ ಟ್ಯಾಂಕರ್ ನೀರು ಪೂರೈಸುತ್ತಿರುವದು, ಅನಿಶ್ಚಿತ ಮಳೆಯ ಕಣ್ಣಾಮುಚ್ಚಾಲೆಯಿಂದ ರೈತರು ಬಸವಳಿಯುತ್ತಿರುವುದಕ್ಕೆ ಸಾಕ್ಷಿಯಾಗಿದೆ~ ಎಂದು ಕೃಷಿ ತಜ್ಞ ನೀಲಕಂಠೇಗೌಡ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>