<p><strong>ಬೆಂಗಳೂರು:</strong> `ಗಂಡ ಹೆಂಡತಿ ಪರಸ್ಪರ ಪ್ರೀತಿಸುವಂತೆ ಯಾವುದೇ ಕಾನೂನನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ನನಗೆ ಕಾನೂನಿನಲ್ಲಿ ನಂಬಿಕೆಯಿಲ್ಲ~ ಎಂದು ಕಾನೂನು ಆಯೋಗ ಅಧ್ಯಕ್ಷ ವಿ. ಎಸ್. ಮಳಿಮಠ್ ಅಭಿಪ್ರಾಯಪಟ್ಟರು. <br /> <br /> ರಾಜ್ಯ ಮಹಿಳಾ ಆಯೋಗವು ಸುಮಂಗಲಿ ಸೇವಾ ಆಶ್ರಮದ ಸಹಯೋಗದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ `ಕೌಟುಂಬಿಕ ದೌರ್ಜನ್ಯ- ಮಹಿಳೆಯರ ಮತ್ತು ಮಹನೀಯರ ಸಮಸ್ಯೆಗಳು~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.<br /> <br /> `ಕೌಟುಂಬಿಕ ಮಟ್ಟದಲ್ಲಿ ಸಂಬಂಧಗಳನ್ನು ಬೆಸೆಯಲು ಕಾನೂನಿನಿಂದ ಸಾಧ್ಯವಿಲ್ಲ. ಸಂಸ್ಕೃತಿ, ಸಂಪ್ರದಾಯಗಳು ಮಾತ್ರ ಸಂಬಂಧಗಳನ್ನು ಉಳಿಸಬಲ್ಲದು. ಈ ವಿಚಾರದ ಬಗ್ಗೆ ಕಾನೂನು ರಚಿಸುವ ನನಗೆ ಸ್ಪಷ್ಟ ಅರಿವಿದೆ~ ಎಂದ ಅವರು, `ಭಾರತೀಯ ಸಂಸ್ಕೃತಿಯಲ್ಲಿ ಗಂಡ ಹೆಂಡತಿ ಪರಸ್ಪರ ಕರ್ತವ್ಯವನ್ನು ಹಂಚಿಕೊಂಡು ಬದುಕಬೇಕು. <br /> <br /> ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯ ಹಕ್ಕು ಪ್ರತಿಪಾದನೆಯ ಫಲವಾಗಿ ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಕೌಟುಂಬಿಕ ಕಲಹಗಳು ಹೆಚ್ಚುತ್ತಿವೆ. ಇದಕ್ಕೆ ಯಾವುದೇ ಕಾನೂನಿನ ಚೌಕಟ್ಟನ್ನು ಒದಗಿಸಲು ಸಾಧ್ಯವಿಲ್ಲ~ ಎಂದು ಪ್ರತಿಪಾದಿಸಿದರು.<br /> <br /> `ಈಗಿನ ಪೀಳಿಗೆ ತೀವ್ರವಾಗಿ ಪ್ರೀತಿಸುವ ಗುಣವನ್ನು ಕಳೆದುಕೊಂಡಿದೆ. ಪ್ರೀತಿಯಿದ್ದ ಮೇಲೆ ಕೌಟುಂಬಿಕ ದೌರ್ಜನ್ಯ ಎನ್ನುವ ಪ್ರಶ್ನೆಯೇ ಬಾರದು. ಗಂಡ ಹೆಂಡತಿ ಪರಸ್ಪರ ಪ್ರೀತಿಸಲು ಕಲಿಯಿರಿ. ಎಲ್ಲ ತಪ್ಪುಗಳನ್ನು ಪ್ರೀತಿಯ ದೃಷ್ಟಿಕೋನದಿಂದಲೇ ವಿಮರ್ಶಿಸಿದರೆ ದೌರ್ಜನ್ಯ , ದಬ್ಬಾಳಿಕೆ ಮಾಯವಾಗಿ ಸಾಮರಸ್ಯ ಇರುತ್ತದೆ. ವೇಗವಾಗಿ ಬೆಳೆಯುತ್ತಿರುವ ಪ್ರಪಂಚಕ್ಕೆ ತೆರೆದುಕೊಂಡಿರುವುದರಿಂದ ಯಾವುದೇ ಸಮಸ್ಯೆ ಬಂದರೂ ಗಂಡ-ಹೆಂಡತಿಯರಿಬ್ಬಲ್ಲೂ ತಾಳ್ಮೆ, ಸಹನೆ ಮತ್ತು ಪ್ರೀತಿಯಿರಲಿ~ ಎಂದು ಸಲಹೆ ನೀಡಿದರು.<br /> <br /> ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, `ಕುಟುಂಬದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದರೊಂದಿಗೆ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಪುರುಷರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗಿದೆ. ಈ ಎರಡು ವಿಚಾರಗಳ ಬಗ್ಗೆ ಸೂಕ್ತ ಪರಿಹಾರ ಹುಡುಕುವ ಅಗತ್ಯವಿದೆ~ ಎಂದು ತಿಳಿಸಿದರು. <br /> <br /> ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ವಿ. ಎಸ್. ಕುಬೇರ್, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಗಂಡ ಹೆಂಡತಿ ಪರಸ್ಪರ ಪ್ರೀತಿಸುವಂತೆ ಯಾವುದೇ ಕಾನೂನನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ನನಗೆ ಕಾನೂನಿನಲ್ಲಿ ನಂಬಿಕೆಯಿಲ್ಲ~ ಎಂದು ಕಾನೂನು ಆಯೋಗ ಅಧ್ಯಕ್ಷ ವಿ. ಎಸ್. ಮಳಿಮಠ್ ಅಭಿಪ್ರಾಯಪಟ್ಟರು. <br /> <br /> ರಾಜ್ಯ ಮಹಿಳಾ ಆಯೋಗವು ಸುಮಂಗಲಿ ಸೇವಾ ಆಶ್ರಮದ ಸಹಯೋಗದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ `ಕೌಟುಂಬಿಕ ದೌರ್ಜನ್ಯ- ಮಹಿಳೆಯರ ಮತ್ತು ಮಹನೀಯರ ಸಮಸ್ಯೆಗಳು~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.<br /> <br /> `ಕೌಟುಂಬಿಕ ಮಟ್ಟದಲ್ಲಿ ಸಂಬಂಧಗಳನ್ನು ಬೆಸೆಯಲು ಕಾನೂನಿನಿಂದ ಸಾಧ್ಯವಿಲ್ಲ. ಸಂಸ್ಕೃತಿ, ಸಂಪ್ರದಾಯಗಳು ಮಾತ್ರ ಸಂಬಂಧಗಳನ್ನು ಉಳಿಸಬಲ್ಲದು. ಈ ವಿಚಾರದ ಬಗ್ಗೆ ಕಾನೂನು ರಚಿಸುವ ನನಗೆ ಸ್ಪಷ್ಟ ಅರಿವಿದೆ~ ಎಂದ ಅವರು, `ಭಾರತೀಯ ಸಂಸ್ಕೃತಿಯಲ್ಲಿ ಗಂಡ ಹೆಂಡತಿ ಪರಸ್ಪರ ಕರ್ತವ್ಯವನ್ನು ಹಂಚಿಕೊಂಡು ಬದುಕಬೇಕು. <br /> <br /> ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯ ಹಕ್ಕು ಪ್ರತಿಪಾದನೆಯ ಫಲವಾಗಿ ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಕೌಟುಂಬಿಕ ಕಲಹಗಳು ಹೆಚ್ಚುತ್ತಿವೆ. ಇದಕ್ಕೆ ಯಾವುದೇ ಕಾನೂನಿನ ಚೌಕಟ್ಟನ್ನು ಒದಗಿಸಲು ಸಾಧ್ಯವಿಲ್ಲ~ ಎಂದು ಪ್ರತಿಪಾದಿಸಿದರು.<br /> <br /> `ಈಗಿನ ಪೀಳಿಗೆ ತೀವ್ರವಾಗಿ ಪ್ರೀತಿಸುವ ಗುಣವನ್ನು ಕಳೆದುಕೊಂಡಿದೆ. ಪ್ರೀತಿಯಿದ್ದ ಮೇಲೆ ಕೌಟುಂಬಿಕ ದೌರ್ಜನ್ಯ ಎನ್ನುವ ಪ್ರಶ್ನೆಯೇ ಬಾರದು. ಗಂಡ ಹೆಂಡತಿ ಪರಸ್ಪರ ಪ್ರೀತಿಸಲು ಕಲಿಯಿರಿ. ಎಲ್ಲ ತಪ್ಪುಗಳನ್ನು ಪ್ರೀತಿಯ ದೃಷ್ಟಿಕೋನದಿಂದಲೇ ವಿಮರ್ಶಿಸಿದರೆ ದೌರ್ಜನ್ಯ , ದಬ್ಬಾಳಿಕೆ ಮಾಯವಾಗಿ ಸಾಮರಸ್ಯ ಇರುತ್ತದೆ. ವೇಗವಾಗಿ ಬೆಳೆಯುತ್ತಿರುವ ಪ್ರಪಂಚಕ್ಕೆ ತೆರೆದುಕೊಂಡಿರುವುದರಿಂದ ಯಾವುದೇ ಸಮಸ್ಯೆ ಬಂದರೂ ಗಂಡ-ಹೆಂಡತಿಯರಿಬ್ಬಲ್ಲೂ ತಾಳ್ಮೆ, ಸಹನೆ ಮತ್ತು ಪ್ರೀತಿಯಿರಲಿ~ ಎಂದು ಸಲಹೆ ನೀಡಿದರು.<br /> <br /> ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, `ಕುಟುಂಬದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದರೊಂದಿಗೆ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಪುರುಷರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗಿದೆ. ಈ ಎರಡು ವಿಚಾರಗಳ ಬಗ್ಗೆ ಸೂಕ್ತ ಪರಿಹಾರ ಹುಡುಕುವ ಅಗತ್ಯವಿದೆ~ ಎಂದು ತಿಳಿಸಿದರು. <br /> <br /> ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ವಿ. ಎಸ್. ಕುಬೇರ್, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>