<p><strong>ಮುಳಬಾಗಲು: </strong>ಪಂಚೇಂದ್ರಿಯಗಳ ಹೊರತಾದ ವಿಶಿಷ್ಟ ಗ್ರಹಣಾ ಶಕ್ತಿಯ ಬಗ್ಗೆ ಪ್ರಸ್ತಾಪಿಸಿ, ಮನುಷ್ಯ ಜಗತ್ತನ್ನು ನೋಡಬೇಕಾದ ಕ್ರಮಕ್ಕೆ ಹೊಸ ಆಯಾಮ ನೀಡಿದ್ದ ದೇಸಿ ಚಿಂತಕ ಎಂ.ದಾಸಪ್ಪ (83) ಭಾನುವಾರ ಕೋಲಾರದ ಎಸ್ಎನ್ಆರ್ ಆಸ್ಪತ್ರೆಯಲ್ಲಿ ನಿಧನರಾದರು.<br /> <br /> ವಿಶ್ವದ ಎಲ್ಲ ಅಂಶಕ್ಕೂ ಗಣಿತವೇ ಆಧಾರ ಎಂಬ ಪೈತಾಗಾರಸ್ ಪ್ರತಿಪಾದನೆಯನ್ನು ಹೊಸ ಕ್ರಮದಲ್ಲಿ ವಿಸ್ತರಿಸಿ, ಜಗತ್ತಿನ ಎಲ್ಲ ಕ್ರಿಯೆಗಳಿಗೂ ಗಣಿತ ಸಾಗರವೇ ಕಾರಣ ಎಂದು ದಾಸಪ್ಪ ವ್ಯಾಖ್ಯಾನಿಸಿದ್ದರು. ದಾಸಪ್ಪನವರ ಚಿಂತನೆಗಳನ್ನು ಇತಿಹಾಸ ಪ್ರಾಧ್ಯಾಪಕರಾದ ಜಿ.ಶಿವಪ್ಪ ‘ಶೂನ್ಯ ಮಹಿಮೆ’ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.<br /> <br /> ದೇವನೂರು ಮಹಾದೇವ ಅವರು ಕಳೆದ ವರ್ಷ ದಾಸಪ್ಪ ಅವರಿಗೆ ಕೋಲಾರದ ಆದಿಮ ಸಂಸ್ಥೆಯಲ್ಲಿ ‘ಗದ್ದುಗೆ ಗೌರವ’ ಸಲ್ಲಿಸಿದ್ದರು. ಕಲಾವಿದ ಅರವಿಂದ ಕಟ್ಟಿ ಅವರು ದಾಸಪ್ಪನವರ ಚಿಂತನೆ ಪ್ರತಿನಿಧಿಸುವ ಚಿಂತನೆಗಳಿಗೆ ಚಿತ್ರರೂಪ ನೀಡಿದ್ದರು.<br /> <br /> ‘ದಾಸಪ್ಪ ನಮ್ಮ ನೆಲದ ಬಹುದೊಡ್ಡ ಆಧ್ಯಾತ್ಮಿಕ ಚಿಂತಕ. ಅವರ ಸಾವಿನಿಂದ ಮಾನವೀಯ ಸಂತನನ್ನು ಈ ನೆಲ ಕಳೆದುಕೊಂಡಂತೆ ಆಗಿದೆ’ ಎಂದು ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಲು: </strong>ಪಂಚೇಂದ್ರಿಯಗಳ ಹೊರತಾದ ವಿಶಿಷ್ಟ ಗ್ರಹಣಾ ಶಕ್ತಿಯ ಬಗ್ಗೆ ಪ್ರಸ್ತಾಪಿಸಿ, ಮನುಷ್ಯ ಜಗತ್ತನ್ನು ನೋಡಬೇಕಾದ ಕ್ರಮಕ್ಕೆ ಹೊಸ ಆಯಾಮ ನೀಡಿದ್ದ ದೇಸಿ ಚಿಂತಕ ಎಂ.ದಾಸಪ್ಪ (83) ಭಾನುವಾರ ಕೋಲಾರದ ಎಸ್ಎನ್ಆರ್ ಆಸ್ಪತ್ರೆಯಲ್ಲಿ ನಿಧನರಾದರು.<br /> <br /> ವಿಶ್ವದ ಎಲ್ಲ ಅಂಶಕ್ಕೂ ಗಣಿತವೇ ಆಧಾರ ಎಂಬ ಪೈತಾಗಾರಸ್ ಪ್ರತಿಪಾದನೆಯನ್ನು ಹೊಸ ಕ್ರಮದಲ್ಲಿ ವಿಸ್ತರಿಸಿ, ಜಗತ್ತಿನ ಎಲ್ಲ ಕ್ರಿಯೆಗಳಿಗೂ ಗಣಿತ ಸಾಗರವೇ ಕಾರಣ ಎಂದು ದಾಸಪ್ಪ ವ್ಯಾಖ್ಯಾನಿಸಿದ್ದರು. ದಾಸಪ್ಪನವರ ಚಿಂತನೆಗಳನ್ನು ಇತಿಹಾಸ ಪ್ರಾಧ್ಯಾಪಕರಾದ ಜಿ.ಶಿವಪ್ಪ ‘ಶೂನ್ಯ ಮಹಿಮೆ’ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.<br /> <br /> ದೇವನೂರು ಮಹಾದೇವ ಅವರು ಕಳೆದ ವರ್ಷ ದಾಸಪ್ಪ ಅವರಿಗೆ ಕೋಲಾರದ ಆದಿಮ ಸಂಸ್ಥೆಯಲ್ಲಿ ‘ಗದ್ದುಗೆ ಗೌರವ’ ಸಲ್ಲಿಸಿದ್ದರು. ಕಲಾವಿದ ಅರವಿಂದ ಕಟ್ಟಿ ಅವರು ದಾಸಪ್ಪನವರ ಚಿಂತನೆ ಪ್ರತಿನಿಧಿಸುವ ಚಿಂತನೆಗಳಿಗೆ ಚಿತ್ರರೂಪ ನೀಡಿದ್ದರು.<br /> <br /> ‘ದಾಸಪ್ಪ ನಮ್ಮ ನೆಲದ ಬಹುದೊಡ್ಡ ಆಧ್ಯಾತ್ಮಿಕ ಚಿಂತಕ. ಅವರ ಸಾವಿನಿಂದ ಮಾನವೀಯ ಸಂತನನ್ನು ಈ ನೆಲ ಕಳೆದುಕೊಂಡಂತೆ ಆಗಿದೆ’ ಎಂದು ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>