150ಕ್ಕೂ ಹೆಚ್ಚು ಯಕ್ಷಗಾನಪ್ರಸಂಗಗಳನ್ನು ಬರೆದಿದ್ದ ಅನಂತರಾಮ ಬಂಗಾಡಿ, ಯಕ್ಷಗಾನ ಛಂದಸ್ಸಿನ ಅಧ್ಯಯನ ಮತ್ತು ಕನ್ನಡ ಸಾಹಿತ್ಯ ಅಧ್ಯಯನ ನಡೆಸಿದ್ದರು. ಅವರು ಬರೆದ ‘ಕಾಡ ಮಲ್ಲಿಗೆ’, ‘ಕಚ್ಚೂರ ಮಾಲ್ದಿ’, ‘ಬೊಳ್ಳಿ ಗಿಂಡೆ’, ‘ಪಟ್ಟದ ಪದ್ಮಲೆ’ ಮುಂತಾದ ಪ್ರಸಂಗಗಳು ಪ್ರದರ್ಶನ ಕಂಡಿವೆ. ಕ್ರೈಸ್ತ ಸಂತರ ಕತೆಗಳನ್ನೂ ಯಕ್ಷಗಾನಕ್ಕೆ ಅಳವಡಿಸಿದ್ದರು. ಅವರ ನೇತೃತ್ವದಲ್ಲಿ ರೂಪು
ಗೊಂಡ ‘ಸೌಹಾರ್ದ ಕಲಾವಿದರು, ಯಕ್ಷರಂಗ ಬಂಗಾಡಿ’ ತಂಡ 15 ವರ್ಷಗಳ ಕಾಲ ವಿವಿಧೆಡೆ ಪ್ರದರ್ಶನ ನೀಡಿದೆ. ಜ್ಯೋತಿರ್ವಿಜ್ಞಾನ ಕ್ಷೇತ್ರದಲ್ಲಿಯೂ ಜ್ಞಾನ ಹೊಂದಿದ್ದ ಅವರು ಮೊತ್ತ ಮೊದಲ ‘ತುಳು ಜ್ಯೋತಿಷ ಗ್ರಂಥ’ ಬರೆದಿದ್ದರು. ತುಳು ನಿಘಂಟು ರಚನೆಯಲ್ಲಿಯೂ ತೊಡಗಿಸಿಕೊಂಡಿದ್ದರು. ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಹಿತ ಅನೇಕ ಪುರಸ್ಕಾರಗಳು ಅವರಿಗೆ ಸಂದಿವೆ.