<p><strong>ಹುಬ್ಬಳ್ಳಿ: </strong>ಧಾರವಾಡದ ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಪ್ರತಿ ವರ್ಷವೂ ನೀಡುವ ಬೇಂದ್ರೆ ಗ್ರಂಥ ಬಹುಮಾನಕ್ಕೆ 40 ವರ್ಷದೊಳಗಿನದ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.<br /> <br /> ಕಾವ್ಯ, ಕಥೆ, ನಾಟಕ, ಕಾದಂಬರಿ, ಜೀವನಚರಿತ್ರೆ, ಲಲಿತ ಪ್ರಬಂಧ, ವಿಮರ್ಶೆ ಹಾಗೂ ಅನುವಾದ ಈ ಎಂಟು ಪ್ರಕಾರದ ಪುಸ್ತಕಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದು. 2011ರಲ್ಲಿ ತಮ್ಮ ಪುಸ್ತಕ ಪ್ರಕಟಿಸಿದ, 1971ರಲ್ಲಿ ಅಥವಾ ನಂತರದಲ್ಲಿ ಜನಿಸಿದ ಲೇಖಕ-ಲೇಖಕಿಯರ ಪುಸ್ತಕಗಳು ಬಹುಮಾನಕ್ಕೆ ಅರ್ಹವಾಗಿವೆ. ಪ್ರತಿ ಶೀರ್ಷಿಕೆಯ ನಾಲ್ಕು ಪ್ರತಿಗಳನ್ನು ಜನ್ಮದಾಖಲೆಯೊಂದಿಗೆ ಕಳಿಸಬೇಕು. ಇತರೆ ಲೇಖಕರು, ಪ್ರಾಜ್ಞರಾದ ಓದುಗರು ಹಾಗೂ ಪ್ರಕಾಶಕರು ಅರ್ಹ ಕೃತಿಗಳನ್ನು ಸೂಚಿಸಬಹುದಾಗಿದೆ.<br /> <br /> ಲೇಖಕರು ತಮ್ಮ ಕೃತಿಗಳನ್ನು ಇದೇ ಜೂನ್ 30ರ ಒಳಗಾಗಿ `ಅಧ್ಯಕ್ಷರು, ಬೇಂದ್ರೆ ಸ್ಮಾರಕ ಗ್ರಂಥ ಬಹಮಾನ ಸಮಿತಿ, ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಬೇಂದ್ರೆ ಭವನ, ಸಾಧನಕೇರಿ,<strong> </strong>ಧಾರವಾಡ<strong>-</strong>580008~<strong> (ದೂರವಾಣಿ: 0836-2435327</strong>) ಈ ವಿಳಾಸಕ್ಕೆ ಕಳುಹಿಸುವಂತೆ ಪ್ರಕಟಣೆ ಕೋರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಧಾರವಾಡದ ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಪ್ರತಿ ವರ್ಷವೂ ನೀಡುವ ಬೇಂದ್ರೆ ಗ್ರಂಥ ಬಹುಮಾನಕ್ಕೆ 40 ವರ್ಷದೊಳಗಿನದ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.<br /> <br /> ಕಾವ್ಯ, ಕಥೆ, ನಾಟಕ, ಕಾದಂಬರಿ, ಜೀವನಚರಿತ್ರೆ, ಲಲಿತ ಪ್ರಬಂಧ, ವಿಮರ್ಶೆ ಹಾಗೂ ಅನುವಾದ ಈ ಎಂಟು ಪ್ರಕಾರದ ಪುಸ್ತಕಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದು. 2011ರಲ್ಲಿ ತಮ್ಮ ಪುಸ್ತಕ ಪ್ರಕಟಿಸಿದ, 1971ರಲ್ಲಿ ಅಥವಾ ನಂತರದಲ್ಲಿ ಜನಿಸಿದ ಲೇಖಕ-ಲೇಖಕಿಯರ ಪುಸ್ತಕಗಳು ಬಹುಮಾನಕ್ಕೆ ಅರ್ಹವಾಗಿವೆ. ಪ್ರತಿ ಶೀರ್ಷಿಕೆಯ ನಾಲ್ಕು ಪ್ರತಿಗಳನ್ನು ಜನ್ಮದಾಖಲೆಯೊಂದಿಗೆ ಕಳಿಸಬೇಕು. ಇತರೆ ಲೇಖಕರು, ಪ್ರಾಜ್ಞರಾದ ಓದುಗರು ಹಾಗೂ ಪ್ರಕಾಶಕರು ಅರ್ಹ ಕೃತಿಗಳನ್ನು ಸೂಚಿಸಬಹುದಾಗಿದೆ.<br /> <br /> ಲೇಖಕರು ತಮ್ಮ ಕೃತಿಗಳನ್ನು ಇದೇ ಜೂನ್ 30ರ ಒಳಗಾಗಿ `ಅಧ್ಯಕ್ಷರು, ಬೇಂದ್ರೆ ಸ್ಮಾರಕ ಗ್ರಂಥ ಬಹಮಾನ ಸಮಿತಿ, ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಬೇಂದ್ರೆ ಭವನ, ಸಾಧನಕೇರಿ,<strong> </strong>ಧಾರವಾಡ<strong>-</strong>580008~<strong> (ದೂರವಾಣಿ: 0836-2435327</strong>) ಈ ವಿಳಾಸಕ್ಕೆ ಕಳುಹಿಸುವಂತೆ ಪ್ರಕಟಣೆ ಕೋರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>