<p><strong>ಬೆಂಗಳೂರು</strong>: ಹುಲಿ ಅಭಯಾರಣ್ಯದ ಹೃದಯ ಭಾಗದಲ್ಲಿ (ಕೋರ್ ಏರಿಯಾ) ಪ್ರವಾಸೋದ್ಯಮವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಬುಧವಾರದಿಂದಲೇ ರಾಜ್ಯದ ಹುಲಿ ಅಭಯಾರಣ್ಯಗಳಲ್ಲಿ ಸಫಾರಿ ಇರುವುದಿಲ್ಲ.<br /> <br /> ನ್ಯಾಯಾಲಯದ ಆದೇಶ ಸರ್ಕಾರಕ್ಕೆ ಮಂಗಳವಾರವೇ ತಲುಪಿದ್ದು, ಈ ಆದೇಶದ ಅನ್ವಯ ಸಫಾರಿ ನಿಷೇಧವನ್ನು ಜಾರಿಗೆ ತರುವಂತೆ ರಾಜ್ಯದ ಹುಲಿ ಅಭಯಾರಣ್ಯಗಳ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ದೀಪಕ್ ಶರ್ಮ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಶರ್ಮ ಅವರ ಸೂಚನೆ ಮೇರೆಗೆ ರಾಜ್ಯದ ಪ್ರಮುಖ ಹುಲಿ ಅಭಯಾರಣ್ಯ ಹಾಗೂ ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ ಬಂಡೀಪುರ, ನಾಗರಹೊಳೆ, ಭದ್ರಾ, ಅಣಶಿ- ದಾಂಡೇಲಿ ಮತ್ತು ಬಿಳಿಗಿರಿರಂಗನ ದೇವಸ್ಥಾನದಲ್ಲಿ (ಬಿಆರ್ಟಿ) ಪ್ರವಾಸಿಗರನ್ನು ಹೊತ್ತ ಜೀಪ್ಗಳ ಓಡಾಟ ಸಂಪೂರ್ಣವಾಗಿ ನಿಲ್ಲಲಿದೆ. <br /> <br /> ಇದರಿಂದಾಗಿ ಬಂಡೀಪುರ, ನಾಗರಹೊಳೆಯ ಕಬಿನಿ ಹಿನ್ನೀರು, ದಾಂಡೇಲಿ ಮತ್ತು ಬಿಳಿಗಿರಿರಂಗನ ಬೆಟ್ಟದಲ್ಲಿ ಪರಿಸರಸ್ನೇಹಿ ರೆಸಾರ್ಟ್ ನಡೆಸುತ್ತಿರುವ ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ (ಜೆಎಲ್ಆರ್) ಸಹ ಸಫಾರಿ ನಿಲ್ಲಿಸಲಿದೆ. <br /> <br /> <br /> ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನುರ್ ರೆಡ್ಡಿ ಅವರು ಪಿಸಿಸಿಎಫ್ (ವನ್ಯಜೀವಿ) ಅವರ ಆದೇಶ ಮೇಲೆ ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಬುಧವಾರದಿಂದಲೇ ಈ ಆದೇಶ ಜಾರಿಯಾಗಲಿದೆ ಎಂದರು.<br /> <br /> ಪಿಸಿಸಿಎಫ್ (ವನ್ಯಜೀವಿ) ಅವರ ಆದೇಶದ ಮೇರೆಗೆ ಅರಣ್ಯ ಇಲಾಖೆ ಹಾಗೂ ಜೆಎಲ್ಆರ್ ನಡೆಸುತ್ತಿರುವ ಜೀಪ್ ಸಫಾರಿಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇವೆ ಎಂದು ಬಂಡೀಪುರ ಮತ್ತು ನಾಗರಹೊಳೆಯ ಅರಣ್ಯಾಧಿಕಾರಿ ಕುಮಾರ್ ಪುಷ್ಕರ್ ಅವರು ಸ್ಪಷ್ಟಪಡಿಸಿದರು.<br /> <br /> ಹುಲಿ ಅಭಯಾರಣ್ಯ ಎಂದು ಅಧಿಸೂಚನೆ ಹೊರಡಿಸಿರುವ ಸಂಪೂರ್ಣ ಕಾಡನ್ನೇ, ಹೃದಯ ಭಾಗ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ. ಹುಲಿ ಅಭಯಾರಣ್ಯದ ನಿಯಮಾವಳಿಗಳ ಪ್ರಕಾರ, ಹೃದಯ ಭಾಗಕ್ಕೆ ರಕ್ಷಣೆ ನೀಡುವ ರೀತಿಯಲ್ಲಿರುವ ಸುತ್ತಮುತ್ತಲ ಪ್ರದೇಶವನ್ನು `ಬಫರ್ ಜೋನ್~ (ಹೊರ ಭಾಗ) ಎಂದು ಕರೆಯಲಾಗುತ್ತಿದೆ. ರಾಜ್ಯದಲ್ಲಿ ಬಂಡೀಪುರ, ಭದ್ರಾ ಹಾಗೂ ಅಣಶಿ- ದಾಂಡೇಲಿ ಕಾಡಿನಲ್ಲಿ ಹೃದಯ ಭಾಗ ಮತ್ತು ಹೊರ ಭಾಗವನ್ನು ಗುರುತಿಸಲಾಗಿದೆ.<br /> <br /> `ಹೊರ ಭಾಗವನ್ನು ಗುರುತಿಸಲು ಸ್ಥಳೀಯ ಜಿಲ್ಲಾ ಪಂಚಾಯ್ತಿಗಳು ಅನುಮತಿ ನೀಡಬೇಕಾಗುತ್ತದೆ. ಆದರೆ, ನಾಗರಹೊಳೆಯಲ್ಲಿ ಹೊರ ಭಾಗ ಗುರುತಿಸಲು ಕೊಡಗು ಜಿಲ್ಲಾ ಪಂಚಾಯ್ತಿ ಅನುಮತಿ ನೀಡಿಲ್ಲ. ಇದರಿಂದಾಗಿ ಈ ಕಾರ್ಯ ಅಂತಿಮವಾಗಿಲ್ಲ~ ಎಂದು ದೀಪಕ್ ಶರ್ಮ ತಿಳಿಸಿದರು.<br /> <br /> ಇದರ ಜೊತೆಯಲ್ಲಿ ಇತ್ತೀಚೆಗೆ ಹುಲಿ ಅಭಯಾರಣ್ಯದ ಮಾನ್ಯತೆ ಪಡೆದಿರುವ ಬಿಆರ್ಟಿ ಅರಣ್ಯದಲ್ಲಿ `ಹೃದಯ ಭಾಗ~ ಮತ್ತು `ಹೊರ ವಲಯ~ ಗುರುತಿಸುವ ಕೆಲಸ ಆರಂಭವಾಗಬೇಕಿದೆ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಹುಲಿ ಅಭಯಾರಣ್ಯದ ಹೃದಯ ಭಾಗದಲ್ಲಿ (ಕೋರ್ ಏರಿಯಾ) ಪ್ರವಾಸೋದ್ಯಮವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಬುಧವಾರದಿಂದಲೇ ರಾಜ್ಯದ ಹುಲಿ ಅಭಯಾರಣ್ಯಗಳಲ್ಲಿ ಸಫಾರಿ ಇರುವುದಿಲ್ಲ.<br /> <br /> ನ್ಯಾಯಾಲಯದ ಆದೇಶ ಸರ್ಕಾರಕ್ಕೆ ಮಂಗಳವಾರವೇ ತಲುಪಿದ್ದು, ಈ ಆದೇಶದ ಅನ್ವಯ ಸಫಾರಿ ನಿಷೇಧವನ್ನು ಜಾರಿಗೆ ತರುವಂತೆ ರಾಜ್ಯದ ಹುಲಿ ಅಭಯಾರಣ್ಯಗಳ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ದೀಪಕ್ ಶರ್ಮ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಶರ್ಮ ಅವರ ಸೂಚನೆ ಮೇರೆಗೆ ರಾಜ್ಯದ ಪ್ರಮುಖ ಹುಲಿ ಅಭಯಾರಣ್ಯ ಹಾಗೂ ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ ಬಂಡೀಪುರ, ನಾಗರಹೊಳೆ, ಭದ್ರಾ, ಅಣಶಿ- ದಾಂಡೇಲಿ ಮತ್ತು ಬಿಳಿಗಿರಿರಂಗನ ದೇವಸ್ಥಾನದಲ್ಲಿ (ಬಿಆರ್ಟಿ) ಪ್ರವಾಸಿಗರನ್ನು ಹೊತ್ತ ಜೀಪ್ಗಳ ಓಡಾಟ ಸಂಪೂರ್ಣವಾಗಿ ನಿಲ್ಲಲಿದೆ. <br /> <br /> ಇದರಿಂದಾಗಿ ಬಂಡೀಪುರ, ನಾಗರಹೊಳೆಯ ಕಬಿನಿ ಹಿನ್ನೀರು, ದಾಂಡೇಲಿ ಮತ್ತು ಬಿಳಿಗಿರಿರಂಗನ ಬೆಟ್ಟದಲ್ಲಿ ಪರಿಸರಸ್ನೇಹಿ ರೆಸಾರ್ಟ್ ನಡೆಸುತ್ತಿರುವ ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ (ಜೆಎಲ್ಆರ್) ಸಹ ಸಫಾರಿ ನಿಲ್ಲಿಸಲಿದೆ. <br /> <br /> <br /> ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನುರ್ ರೆಡ್ಡಿ ಅವರು ಪಿಸಿಸಿಎಫ್ (ವನ್ಯಜೀವಿ) ಅವರ ಆದೇಶ ಮೇಲೆ ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಬುಧವಾರದಿಂದಲೇ ಈ ಆದೇಶ ಜಾರಿಯಾಗಲಿದೆ ಎಂದರು.<br /> <br /> ಪಿಸಿಸಿಎಫ್ (ವನ್ಯಜೀವಿ) ಅವರ ಆದೇಶದ ಮೇರೆಗೆ ಅರಣ್ಯ ಇಲಾಖೆ ಹಾಗೂ ಜೆಎಲ್ಆರ್ ನಡೆಸುತ್ತಿರುವ ಜೀಪ್ ಸಫಾರಿಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇವೆ ಎಂದು ಬಂಡೀಪುರ ಮತ್ತು ನಾಗರಹೊಳೆಯ ಅರಣ್ಯಾಧಿಕಾರಿ ಕುಮಾರ್ ಪುಷ್ಕರ್ ಅವರು ಸ್ಪಷ್ಟಪಡಿಸಿದರು.<br /> <br /> ಹುಲಿ ಅಭಯಾರಣ್ಯ ಎಂದು ಅಧಿಸೂಚನೆ ಹೊರಡಿಸಿರುವ ಸಂಪೂರ್ಣ ಕಾಡನ್ನೇ, ಹೃದಯ ಭಾಗ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ. ಹುಲಿ ಅಭಯಾರಣ್ಯದ ನಿಯಮಾವಳಿಗಳ ಪ್ರಕಾರ, ಹೃದಯ ಭಾಗಕ್ಕೆ ರಕ್ಷಣೆ ನೀಡುವ ರೀತಿಯಲ್ಲಿರುವ ಸುತ್ತಮುತ್ತಲ ಪ್ರದೇಶವನ್ನು `ಬಫರ್ ಜೋನ್~ (ಹೊರ ಭಾಗ) ಎಂದು ಕರೆಯಲಾಗುತ್ತಿದೆ. ರಾಜ್ಯದಲ್ಲಿ ಬಂಡೀಪುರ, ಭದ್ರಾ ಹಾಗೂ ಅಣಶಿ- ದಾಂಡೇಲಿ ಕಾಡಿನಲ್ಲಿ ಹೃದಯ ಭಾಗ ಮತ್ತು ಹೊರ ಭಾಗವನ್ನು ಗುರುತಿಸಲಾಗಿದೆ.<br /> <br /> `ಹೊರ ಭಾಗವನ್ನು ಗುರುತಿಸಲು ಸ್ಥಳೀಯ ಜಿಲ್ಲಾ ಪಂಚಾಯ್ತಿಗಳು ಅನುಮತಿ ನೀಡಬೇಕಾಗುತ್ತದೆ. ಆದರೆ, ನಾಗರಹೊಳೆಯಲ್ಲಿ ಹೊರ ಭಾಗ ಗುರುತಿಸಲು ಕೊಡಗು ಜಿಲ್ಲಾ ಪಂಚಾಯ್ತಿ ಅನುಮತಿ ನೀಡಿಲ್ಲ. ಇದರಿಂದಾಗಿ ಈ ಕಾರ್ಯ ಅಂತಿಮವಾಗಿಲ್ಲ~ ಎಂದು ದೀಪಕ್ ಶರ್ಮ ತಿಳಿಸಿದರು.<br /> <br /> ಇದರ ಜೊತೆಯಲ್ಲಿ ಇತ್ತೀಚೆಗೆ ಹುಲಿ ಅಭಯಾರಣ್ಯದ ಮಾನ್ಯತೆ ಪಡೆದಿರುವ ಬಿಆರ್ಟಿ ಅರಣ್ಯದಲ್ಲಿ `ಹೃದಯ ಭಾಗ~ ಮತ್ತು `ಹೊರ ವಲಯ~ ಗುರುತಿಸುವ ಕೆಲಸ ಆರಂಭವಾಗಬೇಕಿದೆ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>