<p><strong>ಬೆಂಗಳೂರು: </strong> `ಲೋಕಾಯುಕ್ತರ ಹುದ್ದೆಯನ್ನು ಶೀಘ್ರ ಭರ್ತಿ ಮಾಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ~ ಎಂದು ಕಳೆದ ವಾರವಷ್ಟೇ ಸರ್ಕಾರಕ್ಕೆ ಚಾಟಿ ಬೀಸಿದ್ದ ಹೈಕೋರ್ಟ್, ಸೋಮವಾರ ಪುನಃ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.<br /> <br /> ಈ ಹುದ್ದೆ ನೇಮಕಕ್ಕೆ ಸಂಬಂಧಿಸಿದಂತೆ ಇದೇ 25ರ ಒಳಗೆ ನಿಲುವು ತಿಳಿಸುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸರ್ಕಾರಕ್ಕೆ ಸೂಚಿಸಿದೆ.<br /> <br /> ಲೋಕಾಯುಕ್ತ ನೇಮಕದ ಕುರಿತಾಗಿ ಏಪ್ರಿಲ್ನಲ್ಲಿ ಹೈಕೋರ್ಟ್ ಮಾರ್ಗಸೂಚಿ ರೂಪಿಸಿರುವ ಕಾರಣ, ಪ್ರಕ್ರಿಯೆ ವಿಳಂಬ ಆಗುತ್ತಿದೆ ಎಂಬ ಸರ್ಕಾರದ ವಾದ ನ್ಯಾಯಮೂರ್ತಿಗಳ ಕೋಪಕ್ಕೆ ಕಾರಣವಾಯಿತು.<br /> <br /> `ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಹುದ್ದೆ ನೇಮಕಕ್ಕೆ ಸಂಬಂಧಿಸಿದಂತೆ ಇದುವರೆಗೂ ಸರಿಯಾದ ಮಾರ್ಗಸೂಚಿ ಇಲ್ಲ. ನೇಮಕ ನಿಯಮದಲ್ಲಿ ಕೆಲವು ಗೊಂದಲಗಳು ಇವೆ. ಆದುದರಿಂದ ಸರ್ಕಾರ ಸೂಕ್ತ ಮಾರ್ಗಸೂಚಿ ರೂಪಿಸಬೇಕು. ಅಲ್ಲಿಯವರೆಗೆ ಈ ಹುದ್ದೆಗಳಿಗೆ ನೇಮಕ ಮಾಡುವಾಗ ಕೆಲವೊಂದು ನಿರ್ದೇಶನ ಪಾಲನೆ ಮಾಡಬೇಕು ಎಂದು ಏಪ್ರಿಲ್ನಲ್ಲಿ ಹೇಳಿರುವ ಕೋರ್ಟ್, ಕೆಲವೊಂದು ಮಾರ್ಗಸೂಚಿ ರೂಪಿಸಿದೆ.<br /> <br /> ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಸರ್ಕಾರ ವಿಶೇಷ ಮೇಲ್ಮನವಿ ಸಲ್ಲಿಸಿದ್ದು ಅದು ನೀಡುವ ಆದೇಶಕ್ಕೆ ಕಾಯಲಾಗುತ್ತಿದೆ~ ಎಂದು ಅಡ್ವೊಕೇಟ್ ಜನರಲ್ (ಎ.ಜಿ) ಹೇಳಿದರು.<br /> <br /> `ಮಾರ್ಗಸೂಚಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಕಾಯ್ದೆಯ 3(2)(ಎ) ಹಾಗೂ 3(2)(ಬಿ) ಕಲಮಿನ ಬಗ್ಗೆ ಸುಪ್ರೀಂಕೋರ್ಟ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಕಾಯುತ್ತಿದ್ದೇವೆ. ಕೋರ್ಟ್, ವಿಚಾರಣೆಯನ್ನು ಆಗಸ್ಟ್ 6ಕ್ಕೆ ಮುಂದೂಡಿದೆ. ಅದು ಹೊರಡಿಸುವ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ~ ಎಂದರು.<br /> <br /> ಈ ಹೇಳಿಕೆಗೆ ಪೀಠ ಅಸಮಾಧಾನ ವ್ಯಕ್ತಪಡಿಸಿತು. `ಸುಪ್ರೀಂಕೋರ್ಟ್ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವುದು ಉಪ ಲೋಕಾಯುಕ್ತ ಹುದ್ದೆಗೆ ಸಂಬಂಧಿಸಿದ ಪ್ರಕರಣವೇ ಹೊರತು ಲೋಕಾಯುಕ್ತ ನೇಮಕ ಪ್ರಕರಣ ಅಲ್ಲ. ಹಾಗಿದ್ದ ಮೇಲೆ ಈ ಹುದ್ದೆಗೆ ನೇಮಕ ಮಾಡಲು ನಿಮಗೇನು ಕಷ್ಟ~ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. <br /> <br /> `ಆಗಸ್ಟ್ 6ಕ್ಕೆ ಅರ್ಜಿಯು ವಿಚಾರಣೆಗೆ ಬಂದರೆ ಅಂದೇ ಅಂತಿಮ ಆದೇಶ ಹೊರಬೀಳುತ್ತದೆ ಎಂದು ಹೇಳಲು ಆಗದು. ಆಗೇನು ಮಾಡುತ್ತೀರಿ, ಪುನಃ ನೇಮಕ ವಿಳಂಬ ಮಾಡುವಿರಾ~ ಎಂದು ಕೇಳಿದರು. <br /> <br /> `ಹೈಕೋರ್ಟ್ ರೂಪಿಸಿರುವ ಮಾರ್ಗಸೂಚಿಯಿಂದ ನಿಮಗೆ (ಸರ್ಕಾರಕ್ಕೆ) ತೊಡಕಾಗುತ್ತಿದೆ ಎನ್ನುವುದು ನಿಮ್ಮ ವಾದ. ಆದರೆ ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿದ್ದು ಈ ವರ್ಷದ ಏಪ್ರಿಲ್ನಲ್ಲಿ. ಲೋಕಾಯುಕ್ತ ಹುದ್ದೆ ತೆರವುಗೊಂಡಿದ್ದು 2011ರ ಆಗಸ್ಟ್ನಿಂದ. ಹಾಗಿದ್ದ ಮೇಲೆ ಆಗಸ್ಟ್ನಿಂದ ಏಪ್ರಿಲ್ವರೆಗೆ ನೀವು ಮಾಡಿದ್ದೇನು, ಆಗ ಯಾವ ಮಾರ್ಗಸೂಚಿ ನಿಮಗೆ ತಡೆಯೊಡ್ಡಿತು~ ಎಂದು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.<br /> <br /> `ಸರ್ಕಾರದಿಂದ ಲೋಕಾಯುಕ್ತ ನೇಮಕ ಮಾಡಲು ಕಷ್ಟವಾದರೆ ಹೇಳಿ. ನೇಮಕ ಪ್ರಕ್ರಿಯೆ ಹೇಗೆ ಮಾಡಬೇಕು ಎನ್ನುವುದನ್ನು ನಾವು ಹೇಳುತ್ತೇವೆ~ ಎಂದು ನ್ಯಾ.ಸೇನ್, ಅಡ್ವೊಕೇಟ್ ಜನರಲ್ ಅವರಿಗೆ ತಿಳಿಸಿದರು. <br /> <br /> ಆಗ ಅವರು, `ಶೀಘ್ರದಲ್ಲಿ ನೇಮಕ ಪ್ರಕ್ರಿಯೆ ಆರಂಭಿಸಲು ಸರ್ಕಾರಕ್ಕೆ ತಿಳಿಸಲಾಗುವುದು~ ಎಂದರು. <br /> <br /> ಅದಕ್ಕೆ ನ್ಯಾಯಮೂರ್ತಿಗಳು, `ಮೊದಲು ಆ ಕೆಲಸ ಮಾಡಿ. ಇದೇ 25ರ ಒಳಗೆ ಸ್ಪಷ್ಟ ನಿರ್ಧಾರಕ್ಕೆ ಬನ್ನಿ~ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong> `ಲೋಕಾಯುಕ್ತರ ಹುದ್ದೆಯನ್ನು ಶೀಘ್ರ ಭರ್ತಿ ಮಾಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ~ ಎಂದು ಕಳೆದ ವಾರವಷ್ಟೇ ಸರ್ಕಾರಕ್ಕೆ ಚಾಟಿ ಬೀಸಿದ್ದ ಹೈಕೋರ್ಟ್, ಸೋಮವಾರ ಪುನಃ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.<br /> <br /> ಈ ಹುದ್ದೆ ನೇಮಕಕ್ಕೆ ಸಂಬಂಧಿಸಿದಂತೆ ಇದೇ 25ರ ಒಳಗೆ ನಿಲುವು ತಿಳಿಸುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸರ್ಕಾರಕ್ಕೆ ಸೂಚಿಸಿದೆ.<br /> <br /> ಲೋಕಾಯುಕ್ತ ನೇಮಕದ ಕುರಿತಾಗಿ ಏಪ್ರಿಲ್ನಲ್ಲಿ ಹೈಕೋರ್ಟ್ ಮಾರ್ಗಸೂಚಿ ರೂಪಿಸಿರುವ ಕಾರಣ, ಪ್ರಕ್ರಿಯೆ ವಿಳಂಬ ಆಗುತ್ತಿದೆ ಎಂಬ ಸರ್ಕಾರದ ವಾದ ನ್ಯಾಯಮೂರ್ತಿಗಳ ಕೋಪಕ್ಕೆ ಕಾರಣವಾಯಿತು.<br /> <br /> `ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಹುದ್ದೆ ನೇಮಕಕ್ಕೆ ಸಂಬಂಧಿಸಿದಂತೆ ಇದುವರೆಗೂ ಸರಿಯಾದ ಮಾರ್ಗಸೂಚಿ ಇಲ್ಲ. ನೇಮಕ ನಿಯಮದಲ್ಲಿ ಕೆಲವು ಗೊಂದಲಗಳು ಇವೆ. ಆದುದರಿಂದ ಸರ್ಕಾರ ಸೂಕ್ತ ಮಾರ್ಗಸೂಚಿ ರೂಪಿಸಬೇಕು. ಅಲ್ಲಿಯವರೆಗೆ ಈ ಹುದ್ದೆಗಳಿಗೆ ನೇಮಕ ಮಾಡುವಾಗ ಕೆಲವೊಂದು ನಿರ್ದೇಶನ ಪಾಲನೆ ಮಾಡಬೇಕು ಎಂದು ಏಪ್ರಿಲ್ನಲ್ಲಿ ಹೇಳಿರುವ ಕೋರ್ಟ್, ಕೆಲವೊಂದು ಮಾರ್ಗಸೂಚಿ ರೂಪಿಸಿದೆ.<br /> <br /> ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಸರ್ಕಾರ ವಿಶೇಷ ಮೇಲ್ಮನವಿ ಸಲ್ಲಿಸಿದ್ದು ಅದು ನೀಡುವ ಆದೇಶಕ್ಕೆ ಕಾಯಲಾಗುತ್ತಿದೆ~ ಎಂದು ಅಡ್ವೊಕೇಟ್ ಜನರಲ್ (ಎ.ಜಿ) ಹೇಳಿದರು.<br /> <br /> `ಮಾರ್ಗಸೂಚಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಕಾಯ್ದೆಯ 3(2)(ಎ) ಹಾಗೂ 3(2)(ಬಿ) ಕಲಮಿನ ಬಗ್ಗೆ ಸುಪ್ರೀಂಕೋರ್ಟ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಕಾಯುತ್ತಿದ್ದೇವೆ. ಕೋರ್ಟ್, ವಿಚಾರಣೆಯನ್ನು ಆಗಸ್ಟ್ 6ಕ್ಕೆ ಮುಂದೂಡಿದೆ. ಅದು ಹೊರಡಿಸುವ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ~ ಎಂದರು.<br /> <br /> ಈ ಹೇಳಿಕೆಗೆ ಪೀಠ ಅಸಮಾಧಾನ ವ್ಯಕ್ತಪಡಿಸಿತು. `ಸುಪ್ರೀಂಕೋರ್ಟ್ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವುದು ಉಪ ಲೋಕಾಯುಕ್ತ ಹುದ್ದೆಗೆ ಸಂಬಂಧಿಸಿದ ಪ್ರಕರಣವೇ ಹೊರತು ಲೋಕಾಯುಕ್ತ ನೇಮಕ ಪ್ರಕರಣ ಅಲ್ಲ. ಹಾಗಿದ್ದ ಮೇಲೆ ಈ ಹುದ್ದೆಗೆ ನೇಮಕ ಮಾಡಲು ನಿಮಗೇನು ಕಷ್ಟ~ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. <br /> <br /> `ಆಗಸ್ಟ್ 6ಕ್ಕೆ ಅರ್ಜಿಯು ವಿಚಾರಣೆಗೆ ಬಂದರೆ ಅಂದೇ ಅಂತಿಮ ಆದೇಶ ಹೊರಬೀಳುತ್ತದೆ ಎಂದು ಹೇಳಲು ಆಗದು. ಆಗೇನು ಮಾಡುತ್ತೀರಿ, ಪುನಃ ನೇಮಕ ವಿಳಂಬ ಮಾಡುವಿರಾ~ ಎಂದು ಕೇಳಿದರು. <br /> <br /> `ಹೈಕೋರ್ಟ್ ರೂಪಿಸಿರುವ ಮಾರ್ಗಸೂಚಿಯಿಂದ ನಿಮಗೆ (ಸರ್ಕಾರಕ್ಕೆ) ತೊಡಕಾಗುತ್ತಿದೆ ಎನ್ನುವುದು ನಿಮ್ಮ ವಾದ. ಆದರೆ ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿದ್ದು ಈ ವರ್ಷದ ಏಪ್ರಿಲ್ನಲ್ಲಿ. ಲೋಕಾಯುಕ್ತ ಹುದ್ದೆ ತೆರವುಗೊಂಡಿದ್ದು 2011ರ ಆಗಸ್ಟ್ನಿಂದ. ಹಾಗಿದ್ದ ಮೇಲೆ ಆಗಸ್ಟ್ನಿಂದ ಏಪ್ರಿಲ್ವರೆಗೆ ನೀವು ಮಾಡಿದ್ದೇನು, ಆಗ ಯಾವ ಮಾರ್ಗಸೂಚಿ ನಿಮಗೆ ತಡೆಯೊಡ್ಡಿತು~ ಎಂದು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.<br /> <br /> `ಸರ್ಕಾರದಿಂದ ಲೋಕಾಯುಕ್ತ ನೇಮಕ ಮಾಡಲು ಕಷ್ಟವಾದರೆ ಹೇಳಿ. ನೇಮಕ ಪ್ರಕ್ರಿಯೆ ಹೇಗೆ ಮಾಡಬೇಕು ಎನ್ನುವುದನ್ನು ನಾವು ಹೇಳುತ್ತೇವೆ~ ಎಂದು ನ್ಯಾ.ಸೇನ್, ಅಡ್ವೊಕೇಟ್ ಜನರಲ್ ಅವರಿಗೆ ತಿಳಿಸಿದರು. <br /> <br /> ಆಗ ಅವರು, `ಶೀಘ್ರದಲ್ಲಿ ನೇಮಕ ಪ್ರಕ್ರಿಯೆ ಆರಂಭಿಸಲು ಸರ್ಕಾರಕ್ಕೆ ತಿಳಿಸಲಾಗುವುದು~ ಎಂದರು. <br /> <br /> ಅದಕ್ಕೆ ನ್ಯಾಯಮೂರ್ತಿಗಳು, `ಮೊದಲು ಆ ಕೆಲಸ ಮಾಡಿ. ಇದೇ 25ರ ಒಳಗೆ ಸ್ಪಷ್ಟ ನಿರ್ಧಾರಕ್ಕೆ ಬನ್ನಿ~ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>